ಭಾರತ, ಏಪ್ರಿಲ್ 30 -- ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಹಾಗೂ ಜಿಲ್ಲೆಯ ಪೇರಸಂದ್ರ ಠಾಣೆ ಪೊಲೀಸರು ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ 5,140 ಮೊಬೈಲ್ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿದ್ದಾರೆ. ಹರಿಯಾಣ ಮತ್ತು ರಾಜಸ್ಥಾನದ ಮೇವಾತ್ ಪ್ರದೇಶದ ನಿವಾಸಿಗಳಾದ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಕಳೆದ ನವೆಂಬರ್ ನಲ್ಲಿ ಟ್ರಕ್ ವೊಂದು ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ- 44 ರ ಮೂಲಕ ಬೆಂಗಳೂರಿಗೆ ಆಗಮಿಸುತ್ತಿತ್ತು. ಬೆಂಗಳೂರು ತಲುಪಲು ಕೇವಲ 50 ಕಿಮೀ ಮಾತ್ರ ಬಾಕಿ ಇತ್ತು, ಆದರೆ 24 ಗಂಟೆ ಕಳೆದರೂ ಬೆಂಗಳೂರು ತಲುಪಲೇ ಇಲ್ಲ.
ಕಂಪನಿಯವರು ಜಿಪಿಎಸ್ ಪರಿಶೀಲಿಸಿದಾಗ ಟ್ರಕ್ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಂತಿತ್ತು. ಈ ಟ್ರಕ್ ನಲ್ಲಿ 6,640 ಮೊಬೈಲ್ ಗಳನ್ನು ಸಾಗಿಸುತ್ತಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಟ್ರಕ್ ನಿಂತಲ್ಲೇ ನಿಂತಿದೆಯಾದರೂ...
Click here to read full article from source
To read the full article or to get the complete feed from this publication, please
Contact Us.