ಭಾರತ, ಏಪ್ರಿಲ್ 14 -- ಮೈಸೂರು: 'ಚಾಮರಾಜನಗರದ ಜಮೀನು ವಿಚಾರದಲ್ಲಿ ಆ ಭಾಗದ ಜನರು ಆತಂಕಪಡುವ ಅಗತ್ಯವಿಲ್ಲ. 1950ನೇ ಇಸವಿಯ ದಾಖಲೆಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ತಹಸೀಲ್ದಾರ್ ಹಾಗೂ ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಅಂದಿನ ಮಹಾರಾಜರು ಜಮೀನು ಕೊಟ್ಟಿದ್ದರೆ ಕಿತ್ತುಕೊಳ್ಳುವುದಿಲ್ಲ. ಒಂದು ವೇಳೆ ಜಮೀನು ನಮಗೆ ಸೇರಿದ್ದರೂ ಸಹ ಅಲ್ಲಿನ ಜನತೆ ಆತಂಕಪಡುವ ಅಗತ್ಯವಿಲ್ಲ' ಎಂದಿದ್ದಾರೆ ರಾಜಮಾತೆ ಪ್ರಮೋದಾದೇವಿ ಒಡೆಯರ್.
ಮೈಸೂರು ಅರಮನೆಯ ನಿವಾಸದಲ್ಲಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದ ಅವರು ಈ ವಿಚಾರ ತಿಳಿಸಿದ್ದಾರೆ.
'ಆ ಜಮೀನನ್ನು ರಾಜ್ಯ ಸರ್ಕಾರ ನಮಗೆ ನೀಡಿದರೂ ಕೂಡ ಅಲ್ಲಿನ ಜನರಿಗೆ ತೊಂದರೆ ಕೊಡುವುದಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ. ಅಲ್ಲಿನ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಕಂದಾಯ ಗ್ರಾಮ ಮಾಡುವುದಾಗಿ ಚಾಮರಾಜನಗರ ಜಿಲ್ಲಾಡಳಿತ ಹೇಳಿದ್ದರಿಂದ ನಮ್ಮ ಜಮೀನು ಅಲ್ಲಿರುವ ಕಾರಣ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಯಾವುದೇ ವಿಚಾರವಿದ...
Click here to read full article from source
To read the full article or to get the complete feed from this publication, please
Contact Us.