Bangalore, ಮೇ 2 -- ಬೆಂಗಳೂರು: ಇದು ತಂತ್ರಜ್ಞಾನದ ಯುಗ. ಪ್ರತಿದಿನ ತಂತ್ರಜ್ಞಾದ ಬಳಕೆ ಬದಲಾಗುತ್ತಲೇ ಇರುತ್ತದೆ. ತಂತ್ರಜ್ಞಾನ ಕೃತಕ ಬುದ್ದಿಮತ್ತೆಯಿಂದ ಚಾಟ್‌ ಜಿಪಿಟಿವರೆಗೆ ಮುಂದುವರೆದಿದೆ. ಯಾವುದೇ ವಿಷಯದಲ್ಲೂ ತಂತ್ರಜ್ಞಾನ ಆಧರಿತ ಸೇವೆಯನ್ನು ಬಳಸಿಕೊಂಡರೆ ಅದು ಖಂಡಿತವಾಗಿಯೂ ಲಾಭವೇ ಆಗಲಿದೆ. ಈ ರೀತಿಯ ಪ್ರಯೋಗಗಳು ಭಾಷಾ ಮಟ್ಟದಲ್ಲೂ ಸದ್ದಿಲ್ಲದೇ ನಡೆದಿದೆ. ಬೆಂಗಳೂರಿನಲ್ಲಿಯೇ ತಂತ್ರಜ್ಞಾನ ಬಳಕೆ ಮಾಡಿಕೊಂಡು ದಿನ ನಿತ್ಯದ ವಹಿವಾಟನ್ನು ಸುಲಲಿತ ಮಾಡಿಕೊಂಡಿದ್ದಾರೆ. ದೊಡ್ಡ ಸಮಸ್ಯೆಗಳಷ್ಟೇ ಅಲ್ಲದೆ ಸಿಲ್ಲಿ ಎನ್ನಬಹುದಾದ ಸಮಸ್ಯೆಗಳಿಗೂ ಚಾಟ್‌ ಜಿಪಿಟಿಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲ್ಲೊಬ್ಬ ಕನ್ನಡ ಬಾರದ ಉತ್ತರ ಭಾರತದ ವಿದ್ಯಾರ್ಥಿಯೊಬ್ಬ ಚಾಟ್‌ ಜಿಪಿಟಿ ನೆರವಿನಿಂದ ಆಟೋ ಚಾಲಕನ ಜತೆ ವ್ಯವಹರಿಸಿರುವ ಪ್ರಕರಣ ನಡೆದಿದೆ.

ಆಟೋ ಚಾಲಕ ಕನ್ನಡಿಗ. ಈ ಆಟೋದಲ್ಲಿ ಹೋಗಬೇಕಾದವರು ಒಡಿಶಾ ರಾಜ್ಯದ ರೂರ್ಕೆಲಾದ ವಿದ್ಯಾರ್ಥಿ ಸಜನ್‌ ಮಹ್ತೋ. ಇವರು ತಮ್ಮ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಿತ್ತು. ಆಟೋ ಚಾಲ...