Bengaluru, ಮೇ 2 -- ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ. ಜನರು ಸೂರ್ಯನ ಶಾಖದಿಂದ ಬಳಲುವಂತಾಗಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ದೇಹಕ್ಕೆ ತಂಪು ನೀಡುವ, ಆರೋಗ್ಯ ಕಾಪಾಡುವ ಆಹಾರಗಳ ಮೊರೆ ಹೋಗುವುದು ಸಹಜ. ಭಾರತದಲ್ಲಿ ವರ್ಷಪೂರ್ತಿ ಸಿಗುವ ತರಕಾರಿ ಎಂದರೆ ಅದು ಸೌತೆಕಾಯಿ. ಯಾವುದೇ ಋತುಮಾನವಿರಲಿ ದೇಹವನ್ನು ಹೈಡ್ರೇಟ್‌ ಆಗಿಡಬೇಕೆಂದರೆ ಆಹಾರದಲ್ಲಿ ಸೌತೆಕಾಯಿಯನ್ನು ಸೇರಿಸಿಕೊಳ್ಳಲೇಬೇಕು. ಅದರಲ್ಲೂ ಬೇಸಿಗೆಯ ದಿನಗಳಲ್ಲಂತೂ ಸೌತೆಕಾಯಿ ದೇಹವನ್ನು ತಂಪಾಗಿಡುವ ಆಹಾರದ ಸಾಲಿಗೆ ಸೇರಿದೆ. ಆದರೆ ಸೌತೆಕಾಯಿ ಕೇವಲ ನಿರ್ಜಲೀಕರಣವನ್ನಷ್ಟೇ ದೂರ ಮಾಡುತ್ತದೆಯಾ? ಇಲ್ಲ, ಇದು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಸಹ ಮಾಡುತ್ತದೆ. ಏಕೆಂದರೆ ಸೌತೆಕಾಯಿ ಪೋಷಕಾಂಶಗಳ ಆಗರವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ ಸೌತೆಕಾಯಿ ತಿನ್ನುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ದಿನನಿತ್ಯದ ಸೌತೆಕಾಯಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬ...