Bengaluru, ಏಪ್ರಿಲ್ 29 -- ನಟ ರಾಜವರ್ಧನ್ ಚಿತ್ರೋದ್ಯಮದಲ್ಲಿ ದೊಡ್ಡ ಆಶಯದೊಂದಿಗೆ ಸತತ ಪರಿಶ್ರಮ ಪಡುತ್ತಿರುವ ಹೀರೋ. 2020ರಲ್ಲಿ ಬಿಚ್ಚುಗತ್ತಿ ಚಾಪ್ಟರ್‌ 1; ದಳವಾಯಿ ದಂಗೆ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದರು.

ಅದಾದ ಮೇಲೆ ಪ್ರಣಯಂ, ಹಿರಣ್ಯ, ಗಜರಾಮ ಸೇರಿ ಹಲವು ಸಿನಿಮಾಗಳಲ್ಲಿ ರಾಜವರ್ಧನ್‌ ನಟಿಸಿದ್ದಾರೆ. ಆದರೆ, ಅವರ ಶ್ರಮಕ್ಕೆ ತಕ್ಕದಾದ ಪ್ರತಿಫಲ ಮಾತ್ರ ದಕ್ಕಿಲ್ಲ.

ಇದೀಗ ಇದೇ ರಾಜವರ್ಧನ್‌ಗೆ ಸಾಥ್‌ ನೀಡಲು, ಗೆಲ್ಲಿಸಬೇಕು ಎಂದು ಪಣತೊಟ್ಟಂತಿದ್ದಾರೆ ಚಕ್ರವರ್ತಿ ಚಂದ್ರಚೂಡ.

ಔಟ್ ಅಂಡ್ ಔಟ್ ನಾಡಿನ ಸೊಗಡಿನ ಮಾಸ್ ಎಂಟರ್ಟೈನ್ಮೆಂಟ್ ಕಥೆಯೊಂದನ್ನ ರಾಜವರ್ಧನ್ ಅವರಿಗಾಗಿಯೇ ಹೊತ್ತು ತಂದಿದ್ದಾರೆ ಚಂದ್ರಚೂಡ.

ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆಗೆ ಮೇ ತಿಂಗಳಲ್ಲಿ ಚಿತ್ರದ ಸಂಪೂರ್ಣ ವಿವರಗಳನ್ನ ಈ ನಟ ಮತ್ತು ನಿರ್ದೇಶಕ ಜೋಡಿ ಕೊಡಲಿದೆ. ಉದ್ಯಮದ ದಿಗ್ಗಜರಿಬ್ಬರು ಈ ಚಿತ್ರವನ್ನ ಲಾಂಚ್ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Published by HT Digital Content Services with permission f...