Bengaluru,ಬೆಂಗಳೂರು, ಮೇ 19 -- ಸದ್ಯ ಗ್ರೇಟರ್ ಬೆಂಗಳೂರು ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿ, ಜನ ಜೀವನ ಸುಗಮಗೊಳಿಸುವ ಕ್ರಮಗಳ ಬಗ್ಗೆ ಸರ್ಕಾರ ಸರಿಯಾಗಿ ಗಮನಹರಿಸುತ್ತಿಲ್ಲ ಎಂಬ ಕೂಗು ಕೂಡ ಸದಾ ಕೇಳುವಂಥದ್ದೇ. ಸರ್ಕಾರವನ್ನು, ಜನಪ್ರತಿನಿಧಿಗಳ ಗಮನಸೆಳೆಯುವ ಕೆಲಸ ಆಗುತ್ತಲೇ ಇರಬೇಕಾಗುತ್ತದೆ. ಧನಂಜಯ ಕೆಎಸ್ ಅವರು ಕೂಡ ಇಂಥದ್ದೇ ಕೆಲಸವನ್ನು ಮಾಡಿದ್ದು, ಬೆಂಗಳೂರು-ಬಿಡದಿ -ರಾಮನಗರ - ಚನ್ನಪಟ್ಟಣ ನಡುವೆ ಅಗತ್ಯಕ್ಕೆತಕ್ಕಷ್ಟು ಬಿಎಂಟಿಸಿ ಬಸ್ ಓಡೋದು ಯಾವಾಗ ಎಂದು ಪ್ರಶ್ನಿಸುತ್ತಾ, ಈ ಬಗ್ಗೆ ಗಮನಹರಿಸಲು ಆಗ್ರಹಿಸಿದ್ದಾರೆ. ಅವರ ಬರಹ ಇಲ್ಲಿದೆ.

#ನಿನ್ನೆ ಮತ್ತು #ಇಂದು

ಸಂಜೆ ಎಂಟೂವರೆಯ ಸಮಯ. ಬಿಡದಿಯಿಂದ ರಾಮನಗರಕ್ಕೆ ಬರುವವನಿದ್ದೆ. ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಎರಡೂ ಬಸ್ ಶೆಲ್ಟರ್ ನಲ್ಲಿ ಜನ ತುಂಬಿದ್ದರು. ಯಾವುದೇ ವಿದ್ಯುತ್ ದೀಪಗಳು ಉರಿಯುತ್ತಿರಲಿಲ್ಲ. ಅಷ್ಟೇ ಜನ ರಸ್ತೆಯಲ್ಲಿ ಬಸ್ ಗಾಗಿ ಎದುರು ನೋಡುತ್ತಿದ್ದರು. ಅದರಲ್ಲಿ ಮಹಿಳೆಯರು, ಹಿರಿಯ ವಯಸ್ಕರು, ವಿದ್ಯಾರ್ಥಿಗ...