Bengaluru, ಮೇ 20 -- ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯಲಾಗುತ್ತದೆ. ಪಾಲಿಕೆಯನ್ನು ವಿಸರ್ಜಿಸಿ, ಆಡಳಿತ ವಿಕೇಂದ್ರಿಕರಣ ಮತ್ತು ಮರುವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಗ್ರೇಟರ್ ಬೆಂಗಳೂರು ಬ್ರಾಂಡ್ ಆಗದಿರಲು ಕಾರಣವೇನು ಎನ್ನುವುದನ್ನು ರಾಜೀವ್ ಹೆಗಡೆ ವಿವರಿಸಿದ್ದಾರೆ. ಅವರ ಫೇಸ್‌ಬುಕ್ ಬರಹದ ಯಥಾವತ್ ಪ್ರತಿ ಇಲ್ಲಿದೆ.

- ಬೆಂಗಳೂರಿಗರು ಸರಿಯಾಗಿ ಮನೆ ಕಟ್ಟಿಲ್ಲ.

- ಕಸವನ್ನು ಜನರು ಸರಿಯಾಗಿ ಹಾಕುವುದಿಲ್ಲ.

- ರಸ್ತೆಗಳು ಹೊಂಡಗಳಾಗುವ ರೀತಿ ವಾಹನ ಓಡಿಸುತ್ತಾರೆ.

- ನಗರದಲ್ಲಿನ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸರಿಯಾಗಿ ಜನರು ತೆರಿಗೆ ಕಟ್ಟುತ್ತಿಲ್ಲ.

- ತೆರಿಗೆ ಕಟ್ಟುವ ಹಣದಲ್ಲೂ ಅರ್ಧಕ್ಕೂ ಅಧಿಕ ಪ್ರಮಾಣವನ್ನು ಕಮೀಷನ್‌ ರೂಪದಲ್ಲಿ ಜನರೇ ಲೂಟಿ ಮಾಡುತ್ತಿದ್ದಾರೆ.

- ಪ್ರತಿದಿನ ಮನೆ, ಕಿಚನ್‌, ಶೌಚಾಲಯ ಸ್ವಚ್ಛಗೊಳಿಸುವಂತೆ ಚರಂಡಿ, ರಾಜಕಾಲುವೆಗೆ ಇಳಿದು ಸ್ವಚ್ಛಗೊಳಿಸಬೇಕಾದ ಬೆಂಗಳೂರಿಗರು ನಿದ್ರ...