ಭಾರತ, ಮೇ 23 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ದಿಯಾ ಮತ್ತು ಜೈದೇವ್‌ ಚಕ್ಕಂದ ಆಡುವಾಗ ಮಲ್ಲಿ ಎಂಟ್ರಿ ನೀಡಿದ್ದಾಳೆ. ಈ ಸಮಯದಲ್ಲಿ ಮಲ್ಲಿಯು ದಿಯಾಳಿಗೆ ಸರಿಯಾದ ಪಾಠ ಕಲಿಸಿದ್ದಾಳೆ. ಇನ್ನೊಂದೆಡೆ ಕನಕದುರ್ಗಾ ಗೆಸ್ಟ್‌ ಹೌಸ್‌ನಲ್ಲಿ ಗೌತಮ್‌ ಟೀಮ್‌ ಎಂಜಾಯ್‌ ಮಾಡುತ್ತಿದೆ. ಒಬ್ಬರೊಬ್ಬರ ಕಾಲು ಎಳೆಯುತ್ತ ತಮಾಷೆ ಮಾಡುತ್ತ ಮಜಾ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಭೂಮಿಕಾಳಿಗೆ ಹುಟ್ಟುವ ಮಗುವಿನ ಕುರಿತೂ ಚರ್ಚೆಯಾಗಿದೆ. "ನನಗೆ ಹೆಣ್ಣು ಮಗು ಬೇಕು. ಅವಳಿಗೆ ರಾಜಕುಮಾರಿ ಎಂದು ಹೆಸರು ಇಡುವೆ" ಎಂದು ಗೌತಮ್‌ ಹೇಳುತ್ತಾರೆ. ಹೆಣ್ಣು ಮಗು ಅಲ್ಲಾ, ಗಂಡು ಮಗು ಆಗೋದು... ರಾಜಕುಮಾರ ಎಂದು ಹೆಸರು ಇಡುವೆ ಎಂದು ಭೂಮಿಕಾ ಹೇಳುತ್ತಾರೆ. ಹೀಗೆ ಗಂಡು ಮತ್ತು ಹೆಣ್ಣು ಮಗು ಎಂದು ಚರ್ಚೆ ನಡೆಯುತ್ತದೆ. "ನಿಮಗೆ ಗಂಡು-ಹೆಣ್ಣು ಇಬ್ಬರೂ ಹುಟ್ಟಲಿ, ಅವಳಿಜವಳಿ ಮಗು ಹುಟ್ಟಲಿ" ಎಂದು ಆನಂದ್‌ ಹೇಳುತ್ತಾನೆ.

ಜೈದೇವ್‌ ಐದು ನಿಮಿಷದಲ್ಲಿ ಬರ್ತಿನಿ ಎಂದು ಹೋಗಿದ್ದಾನೆ. ಇದೇ ಸಮಯದಲ್ಲಿ ದಿಯಾ...