Bangalore, ಮೇ 17 -- ಬೆಂಗಳೂರು: ಕರ್ನಾಟಕ ಸರ್ಕಾರವು ಎರಡು ವರ್ಷದ ಹಿಂದೆ ಜಾರಿಗೆ ತಂದಿರುವ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಯನ್ನು ಬಳಸಿಕೊಳ್ಳುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯಿಂದ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದರಲ್ಲೂ ಯೋಜನೆಗಳನ್ನು ಬಳಸಿಕೊಂಡರು ಯೂನಿಟ್‌ ಬಳಕೆ ವಿಚಾರದಲ್ಲಿ ಗೊಂದಲ ಇದ್ದವರು, ಅಲ್ಲದೇ ಮಂಜೂರಾದ ಲೋಡ್‌ಗಿಂತಲೂ ಅಧಿಕ ವಿದ್ಯುತ್‌ ಬಳಕೆ ಮಾಡುವ ಗ್ರಾಹಕರಿಗೂ ಸೂಚನೆಗಳನ್ನು ಇಂಧನ ಇಲಾಖೆ ನೀಡಿದೆ. ಆಯಾ ಎಸ್ಕಾಂಗಳ ಉಪವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗಳ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇಂಧನ ಇಲಾಖೆ ಆಯಾ ಎಸ್ಕಾಂಗಳ ಮೂಲಕ ನೀಡಿರುವ ಸೂಚನೆಗಳನ್ನು ಗ್ರಾಹಕರು ಗಮನಿಸಿ ಕಟ್ಟು ನಿಟ್ಟಾಗಿ ಪಾಲಿಸಬೇಕು. ಮಿತಿಯನ್ನು ಮೀರಿ ವಿದ್ಯುತ್‌ ಬಳಸುವವರಿಗೆ ದಂಡ ಪ್ರಯೋಗ ಮಾಡುವ ವಿವರವನ್ನೂ ಒದಗಿಸಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರ...