ಭಾರತ, ಫೆಬ್ರವರಿ 4 -- ಸುಖ ಸಮೃದ್ಧಿ ಯಂತ್ರವು ಕೇವಲ ಒಂದು ಕುಟುಂಬ ವರ್ಗಕ್ಕೆ ಸೀಮಿತವಾಗಿರುತ್ತದೆ. ಸುಖ ಸಮೃದ್ಧಿಯ ವಿಚಾರಕ್ಕೆ ಬಂದರೆ ಎರಡು ಗ್ರಹಗಳನ್ನು ಮುಖ್ಯವಾಗಿ ಪರಿಗಣಿಸಬೇಕು. ಅವುಗಳೆಂದರೆ ಗುರು ಮತ್ತು ಶುಕ್ರಗ್ರಹಗಳು. ಗುರುವು ಒಳ್ಳೆಯ ಜ್ಞಾನ, ದೈವಿಕ ಗುಣಧರ್ಮ ಮತ್ತು ಉತ್ತಮ ಮನಸ್ಥಿಯನ್ನು ಮುಖ್ಯವಾಗಿ ಸೂಚಿಸುತ್ತದೆ. ಇದರಿಂದ ಹಣಕಾಸಿನ ವಿಚಾರವನ್ನು ಸಹ ತಿಳಿಯಬಹುದಾಗಿದೆ. ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸತ್ಯದ ಹಾದಿಯಲ್ಲಿ ಪೂರೈಸಲು ಗುರುವಿನ ಅನುಗ್ರಹ ಅವಶ್ಯಕವಾಗುತ್ತದೆ. ಶುಕ್ರಗ್ರಹವು ಮೋಹವನ್ನು ಸೂಚಿಸುತ್ತದೆ. ಸಂಸಾರದ ಬಗ್ಗೆ ಅಭಿಮಾನ ಮತ್ತು ಕಾಳಜಿಯು ಹೆಚ್ಚಲು ಸಹಕಾರಿಯಾಗುತ್ತದೆ.

ಜೀವನದಲ್ಲಿ ಸುಖ-ಸಂತೋಷವು ನೆಲಸಲು ಸಹಕಾರಿಯಾಗುತ್ತದೆ. ಗುರುವಿನಿಂದ ದೊರೆಯುವ ಒಳ್ಳೆಯ ಯೋಜನೆಗಳು ಕಾರ್ಯರೂಪಕ್ಕೆ ಬರಲು ಶುಕ್ರನು ಸಹಾಯ ಮಾಡುತ್ತಾನೆ. ಶುಕ್ರನು ಮಧುರವಾದ ಮಾತಿಗೆ ಕಾರಕನಾಗುತ್ತಾನೆ. ಹಣಕಾಸಿನ ಅನುಕೂಲತೆಯನ್ನು ಸಹ ಸೂಚಿಸುತ್ತಾನೆ. ಕಷ್ಟರಹಿತ ಅಥವ ಐಷಾರಾಮಿ ಜೀವನವು ದೊರೆಯಲು ಶುಕ್ರನ ಸಬಲ...