Bangalore, ಮೇ 7 -- ದೂರದ ಗುಜರಾತ್‌ ರಾಜ್ಯದಲ್ಲಿ ನಡೆಯುತ್ತಿರುವ ರೈಲ್ವೆ ಸೇತುವೆ ಕಾಮಗಾರಿಯಿಂದಾಗಿ ಮೈಸೂರು ಹಾಗೂ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗಲಿದೆ. ಅದರಲ್ಲೂ ಮೇ ಹಾಗೂ ಜೂನ್‌ ತಿಂಗಳಲ್ಲಿ ಈ ವ್ಯತ್ಯಯವಾಗಲಿದೆ. ಗೆರತ್ಪುರ್-ವಡೋದರ ವಿಭಾಗದ ವಸದ್ ಮತ್ತು ರಾನೋಲಿ ನಿಲ್ದಾಣಗಳ ನಡುವೆ ಬ್ರಿಡ್ಜ್ ಕಾರ್ಯ ನಡೆಯಲಿರುವ ಕಾರಣ, ಕೆಳಗೆ ತಿಳಿಸಲಾದ ಎರಡು ಪ್ರಮುಖ ಎಕ್ಸ್ ಪ್ರೆಸ್ ರೈಲುಗಳ ಸಂಚಾರದಲ್ಲಿ ನಿಯಂತ್ರಣವಾಗಲಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

2025 ರ ಮೇ 14, 21, 28 ಮತ್ತು ಜೂನ್ 4, ರಂದು ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16533 ಭಗತ್ ಕಿ ಕೋಠಿ - ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ಮಾರ್ಗದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.

2025 ರ ಮೇ 11, 18 ಮತ್ತು ಜೂನ್ 8 ರಂದು ಅಜ್ಮೀರ್ ನಿಲ್ದಾಣದಿಂದ ಪ್ರಯಾಣ ಆರಂಭಿ...