ಭಾರತ, ಏಪ್ರಿಲ್ 29 -- ಉದ್ಯಮಿ ದಿಲೀಪ್ ಎನ್‌ಆರ್‌ ಆತ್ಮಹತ್ಯೆ: ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷ, ಉದ್ಯಮಿ ದಿಲೀಪ್ ಎನ್‌ಆರ್‌ ಎಂಬುವವರು ಸ್ವತಃ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ. ಮಂಗಳವಾರ ನಸುಕಿನ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರ್ಕಳ ತಾಲೂಕು ನಿಟ್ಟೆ ರಾಜ್ಯ ಹೆದ್ದಾರಿಯಲ್ಲಿ ದೂಪದಕಟ್ಟೆ ಎಂಬಲ್ಲಿ ತನ್ನ ಕಾರು ನಿಲ್ಲಿಸಿ, ಅದರಲ್ಲೇ ಕುಳಿತು ವಿಷ ಸೇವಿಸಿ ಬಳಿಕ ತನ್ನ ಎದೆ ತಾನೇ ಗುಂಡು ಹಾರಿಸಿಕೊಂಡು ದಿಲೀಪ್ ಎನ್ಆರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ಎನ್ ಆರ್ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಉದ್ಯಮದಲ್ಲಿ ನಷ್ಟವನ್ನು ಕೂಡ ಅನುಭವಿಸಿದ್ದು, ಕಾಯಿಲೆ ಉಲ್ಬಣಗಳ್ಳುತ್ತಿರುವ ಹಿನ್ನಲೆಯಲ್ಲಿ ಮಾನಸಿಕವಾಗಿ ತುಂಬಾ ನೊಂದಿದ್ದರೆನ್ನಲಾಗಿದೆ.

ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷ, ಉದ್ಯಮಿ ದಿಲೀಪ್ ಎನ್‌ಆರ್‌ ಅವರು ಕಾರ್ಕಳ ತೆಳ್ಳಾರು ರಸ್ತೆ ನಿವಾಸಿಯಾಗಿದ್ದು ಮಂಗಳೂರು, ಮುಂಬೈ ಹಾಗೂ ಹೈದರಾಬಾದ್ ನ...