Bengaluru, ಏಪ್ರಿಲ್ 28 -- ಆದಿಗುರು ಗಾಯತ್ರಿ ಜಯಂತಿಯನ್ನು 2025 ಮೇ 2 ರಂದು ಆಚರಿಸಲಾಗುತ್ತದೆ. ಗಾಯತ್ರಿಮಾತೆಯನ್ನು ವೇದಮಾತೆ ಎಂದೇ ಕರೆಯಲಾಗುತ್ತದೆ. ಕೇವಲ ಗಾಯಿಂತ್ರಿ ಮಂತ್ರವನ್ನು ಜಪಿಸುವುದರಿಂದ ಜನ್ಮ ಜನ್ಮಾಂತರದ ಪಾಪಕರ್ಮಗಳು ದೂರವಾಗುತ್ತದೆ. ಇಂದಿನ ದಿನಗಳಲ್ಲಿ ಜಾತಿ ಬೇಧವಿಲ್ಲದೆ ಎಲ್ಲರೂ ಈ ಮಂತ್ರವನ್ನು ಜಪಿಸುತ್ತಾರೆ. ಈ ಮಂತ್ರ ಜಪದಿಂದ ಮೊಗದಲ್ಲಿ ಹೊಸ ವರ್ಚಸ್ಸು ಮೂಡುತ್ತದೆ. ಗಾಯತ್ರಿ ಮಂತ್ರವು ಮೊದಲು ಋಗ್ವೇದದಲ್ಲಿ ಕಂಡುಬಂದಿತು ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಋಗ್ವೇದದಲ್ಲಿ ಪ್ರತಿಯೊಂದು ಮಂತ್ರಗಳಿಗೂ ಛಂದಸ್ಸು ಇರುತ್ತದೆ. ಛಂದಸ್ಸಿನ ಮೂಲಕವೇ ಮಂತ್ರವನ್ನು ಜಪಿಸಬೇಕು. ಇಲ್ಲವಾದಲ್ಲಿ ಯಾವುದೇ ಮಂತ್ರಗಳಿಂದ ನಿರ್ದಿಷ್ಟ ಫಲಗಳನ್ನು ಪಡೆಯಲುಸಾಧ್ಯವಾಗದು. ಗಾಯತ್ರಿ ಛಂದಸ್ಸು 24 ಅಕ್ಷರಗಳಿಂದಾದ ತ್ರಿಪದಿಯಾಗಿದೆ. ಗಾಯತ್ರಿ ಛಂದಸ್ಸಿನಲ್ಲಿ ಬರೆದ ಬೇರೆ ಬೇರೆ ದೇವಾನು ದೇವತೆಗಳ ಮಂತ್ರವನ್ನು ಆಯಾ ದೇವರ ಗಾಯತ್ರಿ ಮಂತ್ರ ಎಂದೇ ಕರೆಯಲಾಗುತ್ತದೆ. ವೇದಮಾತೆಯಾದ ಗಾಯತ್ರಿಯನ್ನು ವೇದಮಾತೆ ಮತ್ತು ಸರಸ್...
Click here to read full article from source
To read the full article or to get the complete feed from this publication, please
Contact Us.