ಭಾರತ, ಮೇ 6 -- ಕನ್ನಡ ಹಾಡು ಹೇಳಲು ಒತ್ತಾಯಿಸಿದ್ದನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಆರಂಭದಿಂದಲೂ ತಮ್ಮ ನಿಲುವೇ ಸರಿ ಎನ್ನುತ್ತಿದ್ದ ಗಾಯಕ ಇದೀಗ ಕನ್ನಡ ಜನತೆಯ ಮುಂದೆ ಮುಂಡಿಯೂರಿದ್ದಾರೆ. ಕ್ಷಮಿಸಿ ಕರ್ನಾಟಕ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳುವಂತೆ ಸೋನು ನಿಗಮ್‌ಗೆ ಒತ್ತಾಯ ಮಾಡಲಾಗಿತ್ತು. ಆಗ ರೊಚ್ಚಿಗೆದ್ದ ಗಾಯಕ ಈ ಘಟನೆಯನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದರು. 'ಕನ್ನಡ ಕನ್ನಡ ಎನ್ನುವುದಕ್ಕೆ ಪಹಲ್ಗಾಮ್ ದಾಳಿ ನಡೆದಿದ್ದು' ಎಂದು ಅವರು ಹೇಳಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕ ರಾಜ್ಯದಾದ್ಯಂತ ಜನರು ನಮ್ಮ ನೆಚ್ಚಿನ ಗಾಯಕನ ಮಾತಿಗೆ ರೋಷಗೊಂಡಿದ್ದರು. ಅಲ್ಲದೇ ಸೋನು ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಆರಂಭದಿಂದಲೂ ತಮ್ಮ ನಿಲುವು ಸರಿ ಎಂದು ವಾದಿಸುತ್ತಿದ್ದ ಸೋನು ನಿಗಮ್ ಕೊನೆಗೂ ಕನ್ನಡಿಗರ...