Belagavi, ಮೇ 24 -- ಬೆಳಗಾವಿ: ಭಾರತದಲ್ಲಿ ವಾಯು ಸಂಬಂಧಿ ಕಾಯಿಲೆಗಳು ಹೆಚ್ಚಾಗಬಹುದು ಎಂದು ನಾನು ಈ ಮೊದಲೇ ಹೇಳಿದ್ದೆ. ಅದರಲ್ಲೂ ಈಗಾಗಲೇ ಭಾರತವನ್ನು ಕಾಡಿರುವ ಕೋವಿಡ್‌ ಎನ್ನುವ ಮಹಾಮಾರಿ ತೊಂದರೆ ಕೊಡಬಹುದು. ಇದು ಐದು ವರ್ಷ ಇರಲಿದ್ದು. ಭಾರತೀಯರನ್ನು ಕಾಡಲಿದೆ ಎಂದು ಹೇಳಿದ್ದೆ. ಈಗ ಮತ್ತೆ ಉಸಿರಾಟದ ಸಮಸ್ಯೆ ಹಲವರಲ್ಲಿ ಕಾಡುತ್ತಿದ್ದು. ಕೋವಿಡ್‌ ಭಯ ಅಲ್ಲಲ್ಲಿ ಕಾಣಿಸುತ್ತಿದೆ. ಇದಲ್ಲದೇ ಭಾರತಕ್ಕೆ ಹಿಮಾಲಯದಿಂದ ಮತ್ತೆ ತೊಂದರೆಯಿದೆ. ಅದೂ ಮೇಘಸ್ಪೋಟವೂ ಆಗಿ ಸಾಕಷ್ಟು ನಷ್ಟ ಆಗಬಹುದು ಎನ್ನುವ ಭಯವಂತೂ ಇದೆ. ಭಾರತದಲ್ಲಿ ಮತೀಯ ಗಲಭೆಗಳು ಹೆಚ್ಚಲಿವೆ. ಯುದ್ದದ ಭಯ ಸದ್ಯಕ್ಕೆ ನಿಲ್ಲುವುದಿಲ್ಲ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳು ಇದೇ ರೀತಿಯ ಯುದ್ದ ಭೀತಿಯನ್ನು ಈ ವರ್ಷದುದ್ದಕ್ಕೂ ಎದುರಿಸಲಿವೆ.

ಇದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿ ಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಅವರು ಹೇಳಿರುವ ಭವಿಷ್ಯ. ಬೆಳಗಾವಿಯಲ್ಲಿ ಕಾರ್ಯಕ್ರಮಗಳಿಗೆಂದು ಆಗಮಿಸಿರುವ ಸ್ವಾಮೀಜಿ ಶನಿವಾರ ತಮ್ಮ...