ಭಾರತ, ಏಪ್ರಿಲ್ 20 -- ಸೇಡಿನ ಸಮರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ (73*) ಮತ್ತು ದೇವದತ್ ಪಡಿಕ್ಕಲ್ (61) ಅವರ ಅಬ್ಬರದ ಅರ್ಧಶತಕಗಳ ಸಹಾಯದಿಂದ ಶ್ರೇಯಸ್ ಅಯ್ಯರ್ ಪಡೆಯ ವಿರುದ್ಧ ರಜತ್ ಪಡೆ 7 ವಿಕೆಟ್​ಗಳ ಜಯಭೇರಿ ಬಾರಿಸಿದೆ. 2 ದಿನಗಳ ಹಿಂದಷ್ಟೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ವಿರುದ್ಧ ಜಯಿಸಿದ್ದ ಪಂಜಾಬ್ ಇದೀಗ ತನ್ನ ತವರಿನಲ್ಲಿ ಮುಗ್ಗರಿಸಿದೆ.

ಈ ಗೆಲುವಿನೊಂದಿಗೆ ಆರ್​ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ-4ರೊಳಗೆ ಪ್ರವೇಶಿಸಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಹಿನ್ನೆಲೆ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 3ನೇ ಸ್ಥಾನಕ್ಕೆ ಏರಿದೆ. 10 ಅಂಕಗಳೊಂದಿಗೆ ಪ್ಲೇಆಫ್​​ನತ್ತ ಪ್ರಬಲ ಹೆಜ್ಜೆ ಹಾಕುತ್ತಿದೆ. ಈ ಸೋಲಿನ ಬಳಿಕ ಪಂಜಾಬ್ 3 ರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ತವರಿನಲ್ಲಿ ಆಡಿರುವ 3ಕ್ಕೆ 3 ಸೋತಿರುವ ಬೆಂಗಳೂರಿನ ತವರಿನ ಹೊರಗೆ ಐದಕ್ಕೆ ಐದೂ ಗೆದ್ದು ಗಮನ ಸೆಳೆದಿದೆ.

ಚಂಡೀಗಢದ ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಅ...