ಭಾರತ, ಏಪ್ರಿಲ್ 20 -- ಸೇಡಿನ ಸಮರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ (73*) ಮತ್ತು ದೇವದತ್ ಪಡಿಕ್ಕಲ್ (61) ಅವರ ಅಬ್ಬರದ ಅರ್ಧಶತಕಗಳ ಸಹಾಯದಿಂದ ಶ್ರೇಯಸ್ ಅಯ್ಯರ್ ಪಡೆಯ ವಿರುದ್ಧ ರಜತ್ ಪಡೆ 7 ವಿಕೆಟ್ಗಳ ಜಯಭೇರಿ ಬಾರಿಸಿದೆ. 2 ದಿನಗಳ ಹಿಂದಷ್ಟೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ವಿರುದ್ಧ ಜಯಿಸಿದ್ದ ಪಂಜಾಬ್ ಇದೀಗ ತನ್ನ ತವರಿನಲ್ಲಿ ಮುಗ್ಗರಿಸಿದೆ.
ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ-4ರೊಳಗೆ ಪ್ರವೇಶಿಸಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಹಿನ್ನೆಲೆ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 3ನೇ ಸ್ಥಾನಕ್ಕೆ ಏರಿದೆ. 10 ಅಂಕಗಳೊಂದಿಗೆ ಪ್ಲೇಆಫ್ನತ್ತ ಪ್ರಬಲ ಹೆಜ್ಜೆ ಹಾಕುತ್ತಿದೆ. ಈ ಸೋಲಿನ ಬಳಿಕ ಪಂಜಾಬ್ 3 ರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ತವರಿನಲ್ಲಿ ಆಡಿರುವ 3ಕ್ಕೆ 3 ಸೋತಿರುವ ಬೆಂಗಳೂರಿನ ತವರಿನ ಹೊರಗೆ ಐದಕ್ಕೆ ಐದೂ ಗೆದ್ದು ಗಮನ ಸೆಳೆದಿದೆ.
ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಅ...
Click here to read full article from source
To read the full article or to get the complete feed from this publication, please
Contact Us.