Bangalore, ಮಾರ್ಚ್ 11 -- ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರ ಬಳಿ ಕಳೆದ ವಾರ ವಿದೇಶಿ ಪ್ರವಾಸಿಗ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನೊಬ್ಬ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ನಾಲೆಗೆ ಬಿದ್ದು ಮೃತಪಟ್ಟ ಪ್ರಕರಣ ಗಂಭೀರ ಸ್ವರೂಪವನ್ನೇ ಪಡೆದುಕೊಂಡಿದೆ. ಘಟನೆಯ ನಂತರ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ರೆಸಾರ್ಟ್‌ಗಳು ಹಾಗು ಹೋಂಸ್ಟೇಗಳ ಮೇಲೆ ಕಣ್ಗಾವಲು ಇರಿಸಿದೆ. ಅಲ್ಲದೇ ಪ್ರತಿ ಜಿಲ್ಲೆಯ ಎಲ್ಲಾ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಗೆ ಖುದ್ದು ನೊಟೀಸ್‌ ಜಾರಿಗೊಳಿಸಲು ಸೂಚಿಸಲಾಗಿದೆ. ಇದರೊಟ್ಟಿಗೆ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳ ಕಾರ್ಯಕ್ರಮ ಪಟ್ಟಿಯನ್ನು ಪಡೆಯಲು ಖುದ್ದು ಭೇಟಿ ನೀಡಬೆಕು. ಪ್ರತೀ ಮಾಲೀಕರಿಂದಲೂ ಮುಚ್ಚಳಕೆಯನ್ನು ಬರೆಯಿಸಿಕೊಳ್ಳ ಬೇಕು ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.

Published by HT Digital Content Services with permission from HT Kannada....