Bengaluru, ಮೇ 12 -- ಗೀತಾ ಧಾರಾವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ಬಿಗ್‌ ಬಾಸ್‌ ಶೋ ಮುನ್ನೆಲೆಗೆ ಬಂದ ಬೆಡಗಿ ಭವ್ಯಾ ಗೌಡ. ಈಗ ಇದೇ ನಟಿ ಜೀ ಕನ್ನಡದಲ್ಲಿ ಇನ್ನೇನು ಪ್ರಸಾರವಾಗಲಿರುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕರ್ಣ ಧಾರಾವಾಹಿ ಮೂಲಕ ಜೀ ಕನ್ನಡ ವಾಹಿನಿಗೆ ಆಗಮಿಸಿದ್ದಾರೆ. ಈಗಾಗಲೇ ಪ್ರೋಮೋ ನೋಡಿದ ವೀಕ್ಷಕರು, ಭವ್ಯಾ ಕಂಡ ರೀತಿಯನ್ನು ಮೆಚ್ಚಿಕೊಂಡು, ಈ ಸೀರಿಯಲ್‌ಗಾಗಿ ಕಾಯುತ್ತಿದ್ದಾರೆ.

ಅಂದಹಾಗೆ ಈ ಸೀರಿಯಲ್‌ನಲ್ಲಿ ನಿಧಿ ಹೆಸರಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ನಿಧಿ ಮತ್ತು ಕರ್ಣನ ಕೆಮಿಸ್ಟ್ರಿಗೆ ನೋಡುಗರಿಂದ ಪೂರ್ಣಾಂಕ ಸಿಕ್ಕಿದೆ.

ಇನ್ನೇನು ಇದೇ ತಿಂಗಳ ಮಾಸಾಂತ್ಯಕ್ಕೆ ಅಥವಾ ಜೂನ್‌ ಮೊದಲ ವಾರದಲ್ಲಿ ಕರ್ಣ ಸೀರಿಯಲ್‌ ಶುರುವಾಗುವ ಸಾಧ್ಯತೆ ಇದೆ.

ಈ ನಡುವೆ ಇದೇ ನಟಿ ಇದೀಗ ಕೇರಳದ ಪುರಾತನ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಕಣ್ಣೂರಿನ ಪಳಯಂಗಡಿ ಬಳಿಯಿರುವ ಮಾಡಾಯಿಕಾವು ಅಥವಾ ತಿರುವರ್ಕಾಡು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಅಂದಹಾಗೆ ...