Bengaluru, ಏಪ್ರಿಲ್ 29 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 28ರ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾಳನ್ನು ಕಂಪನಿಯ ಕೆಲಸದಿಂದ ಬಾಸ್ ಕಿತ್ತು ಹಾಕಿದ್ದಾರೆ. ತಾಂಡವ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರೆ, ಶ್ರೇಷ್ಠಾ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾಂಡವ್ ಬಗ್ಗೆ ಅಸಮಾಧಾನ ಹೊಂದಿದ್ದ ಬಾಸ್, ಅವನಿಗೆ ಎಲ್ಲರ ಎದುರೇ ಕರೆದು ಛೀಮಾರಿ ಹಾಕಿದ್ದಾರೆ. ನಂತರ ಕೆಲಸ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಬಾಸ್ ನಿರ್ಧಾರ ತಾಂಡವ್ ಮತ್ತು ಶ್ರೇಷ್ಠಾಗೆ ನಡುಕ ಉಂಟು ಮಾಡಿದೆ. ಏಕಾಏಕಿ ಯಾವುದೇ ಸೂಚನೆ ಇಲ್ಲದೆ, ಕೆಲಸದಿಂದ ತೆಗೆದು ಹಾಕಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಬಾಸ್ ಕ್ರಮವು ಸರಿಯಲ್ಲ ಎಂದು ಇಬ್ಬರೂ ವಾದಿಸಿದ್ದಾರೆ.

ತನ್ನನ್ನು ಯಾಕೆ ಕೆಲಸದಿಂದ ತೆಗೆದು ಹಾಕಿದ್ದೀರಿ, ನಾನು ಈ ವರ್ಷದ ಬೆಸ್ಟ್ ಎಂಪ್ಲಾಯಿ, ಅಲ್ಲದೆ, ಕಂಪನಿಗೆ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ವಿವಿಧ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಿದ್ದೇನೆ, ಕಂಪನಿಗೆ ಉತ್ತಮ ಆದಾಯ ತಂದುಕೊಟ್ಟಿದ...