Bengaluru, ಏಪ್ರಿಲ್ 3 -- ಬೆಂಗಳೂರು: ಬೇಸಿಗೆ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಅಂತಾ ಪೋಷಕರನ್ನು ಗೋಗರೆಯುತ್ತಿರಬಹುದು. ನೀವು ಪ್ರವಾಸ ಯೋಜಿಸುತ್ತಿದ್ದರೆ ಏಳು ಪ್ಯಾಕೇಜ್ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಈ ಬೇಸಿಗೆಯಲ್ಲಿ ದಕ್ಷಿಣ ಭಾರತದ ವಿವಿಧ ತಾಣಗಳಿಗೆ ಏಳು ಹೊಸ ಪ್ರವಾಸ ಪ್ಯಾಕೇಜ್ಗಳನ್ನು ಪ್ರಾರಂಭಿಸಿದೆ.
ಕೊಡಗಿಗೆ ಎರಡು ದಿನಗಳ ಪ್ಯಾಕೇಜ್ನೊಂದಿಗೆ, ಹೊಸ ಪ್ರವಾಸ ಪ್ಯಾಕೇಜ್ಗಳಲ್ಲಿ ಪುದುಚೇರಿಗೆ ನಾಲ್ಕು ದಿನಗಳ ಪ್ಯಾಕೇಜ್ ಮತ್ತು ಮೈಸೂರು-ಊಟಿ-ಕೊಡೈಕೆನಾಲ್, ಗೋವಾ-ಗೋಕರ್ಣ, ಮುನ್ನಾರ್-ತೆಕ್ಕಡಿ, ಊಟಿ-ಕೂನೂರು-ವಯನಾಡ್ ಮತ್ತು ಕೊಡೈಕೆನಾಲ್-ಮುನ್ನಾರ್ಗಳಿಗೆ ಐದು ದಿನಗಳ ಪ್ಯಾಕೇಜ್ಗಳು ಸೇರಿವೆ.
ಈ ಪ್ಯಾಕೇಜ್ಗಳ ಬೆಲೆ ಕೊಡಗಿಗೆ 4,900 ರೂ.ಗಳಿಂದ ಮೈಸೂರು-ಊಟಿ-ಕೊಡೈಕೆನಾಲ್ಗೆ 10,820 ರೂ.ಗಳವರೆಗೆ ಇರುತ್ತದೆ. ಕರ್ನಾಟಕ, ವಿಶೇಷವಾಗಿ ಬೆಂಗಳೂರಿನ ಪ್ರವಾಸಿಗರ ಬೇಡಿಕೆಯನ್ನು ಆಧರಿಸಿ ಹೊಸ ಪ್ಯಾಕೇಜ್...
Click here to read full article from source
To read the full article or to get the complete feed from this publication, please
Contact Us.