ಭಾರತ, ಮೇ 2 -- ಮಂಡ್ಯ ಪ್ರವಾಸೋದ್ಯಮ: ಕೆಆರ್‌ಎಸ್‌ ಅಣೆಕಟ್ಟೆಯ ಬೃಂದಾವನ ಉದ್ಯಾನದ ಪ್ರವೇಶ ಶುಲ್ಕ ದುಪ್ಪಟ್ಟಾಗಿದೆ. ಮೇ 1 ರಿಂದ ಇದು ಜಾರಿಗೆ ಬಂದಿದ್ದು, ಪ್ರವೇಶ ದರದೊಂದಿಗೆ ಟೋಲ್ ಶುಲ್ಕ, ಪಾರ್ಕಿಂಗ್ ಶುಲ್ಕವೂ ಹೆಚ್ಚಾಗಿದೆ. ಈ ಶುಲ್ಕ ಹೆಚ್ಚಳವು ಪ್ರವಾಸಿಗರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಕಾವೇರಿ ನೀರಾವರಿ ನಿಗಮ ಕೆಆರ್‌ಎಸ್ ಅಣೆಕಟ್ಟೆ ಹಾಗೂ ಬೃಂದಾವನ ಉದ್ಯಾನವನ್ನು ನಿರ್ವಹಿಸುತ್ತಿದ್ದು, ಇತ್ತೀಚೆಗೆ ಪ್ರವೇಶ ಶುಲ್ಕ, ಟೋಲ್ ಶುಲ್ಕ, ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಟೆಂಡರ್ ಕರೆದಿತ್ತು. ಮೆ 1 ರಿಂದ ಹೊಸ ಶುಲ್ಕ ಜಾರಿಗೆ ಬಂದಿದೆ.

ಬೃಂದಾವನ ಉದ್ಯಾನದ ಪ್ರವೇಶ ಶುಲ್ಕ ದುಪ್ಪಟ್ಟಾಗಿದೆ. ಮೇ 1 ರಿಂದ ಇದು ಜಾರಿಗೆ ಬಂದಿದ್ದು, ಪ್ರವೇಶ ದರದೊಂದಿಗೆ ಟೋಲ್ ಶುಲ್ಕ, ಪಾರ್ಕಿಂಗ್ ಶುಲ್ಕವೂ ಹೆಚ್ಚಳವಾಗಿದೆ. ಬೃಂದಾವನ ಪ್ರವೇಶದ್ವಾರದ ದರ, ವಾಹನ ಪಾರ್ಕಿಂಗ್ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್ ಸಂಗ್ರಹಿಸಲು ಕಾವೇರಿ ನೀರಾವರಿ ನಿಗಮ ಟೆಂಡರ್ ಕರೆದಿತ್ತು. ಕರ್ನಾಟಕ ಕಮರ್ಷಿಯಲ್ ಆ್ಯಂಡ್ ಇಂಡಸ್ಟ್ರಿಯ...