ಭಾರತ, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತನ್ನ ಸೋಮಾರಿತನದ ಕಾರಣ ಮೈಕಲ್ ಬ್ರೇಸ್ವೆಲ್ ಅವರ ಸುಲಭ ರನೌಟ್ ಮಿಸ್ ಮಾಡಿದ ಕುಲ್ದೀಪ್ ಯಾದವ್ ವಿರುದ್ಧ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಿಡಿಕಾರಿದ್ದಾರೆ. ಆದರೆ ಇದು ಭಾರತಕ್ಕೆ ದುಬಾರಿಯೂ ಆಗಿದೆ. ಕಳೆದ ಪಂದ್ಯದಲ್ಲೂ ಇದೇ ರೀತಿ ಫೀಲ್ಡಿಂಗ್ನಲ್ಲಿ ನಿರ್ಲಕ್ಷ್ಯ ತೋರಿದ್ದ ಕುಲ್ದೀಪ್ಗೆ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಕೂಡ ಬೈದಿದ್ದರು. ಆದರೆ ಅವತ್ತು ರನೌಟ್ಗೆ ಅವಕಾಶ ಇರಲಿಲ್ಲ.
ಸುಲಭ ರನೌಟ್ ಮಿಸ್ ಮಾಡಿದ ಹಿನ್ನೆಲೆ ಮೈಕಲ್ ಬ್ರೇಸ್ವೆಲ್ ಭಾರತ ತಂಡಕ್ಕೆ ಕಂಟಕವಾದರು. ಬ್ರೆಸ್ವೆಲ್ ಆಗಷ್ಟೆ ಕ್ರೀಸ್ಗೆ ಬಂದು 6 ರನ್ ಸಿಡಿಸಿದ್ದರು. 41ನೇ ಓವರ್ನ 2ನೇ ಎಸೆತದಲ್ಲಿ ಈ ಘಟನೆ ನಡೆದಿಯಿತು. ಮೈಕೆಲ್ ಬ್ರೇಸ್ವೆಲ್ ಚೆಂಡನ್ನು ಬ್ಯಾಕ್ವರ್ಡ್ ಪಾಯಿಂಟ್ ಕಡೆಗೆ ಪಂಚ್ ಮಾಡಿ ಸಿಂಗಲ್ ಪಡೆಯಲು ಓಡಿದರು. ಆದರೆ ಓಡುವಾಗ ನಾನ್ಸ್ಟ್ರೈಕ್ ಕಡೆಯಿಂದ ಡ್ಯಾರಿಲ್ ಮಿಚೆಲ್ ಡಿಕ್ಕಿ ಹೊಡೆಯುವ ಸನ್ನಿವೇಶ ಎದುರಾಯಿತು. ಹೀಗಾಗಿ ...
Click here to read full article from source
To read the full article or to get the complete feed from this publication, please
Contact Us.