ಭಾರತ, ಮೇ 5 -- ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ವಾರದ ಹಿಂದೆ ನಡೆದ ಭಯೋತ್ಪಾದಕರ ದಾಳಿ ಪ್ರಕರಣದ ನಂತರ ಪಾಕಿಸ್ತಾನದ ವಿರುದ್ದ ಕಠಿಣ ಕ್ರಮಕ್ಕೆ ಭಾರತ ಮುಂದಾಗಿದೆ. ತಕ್ಕ ಉತ್ತರ ನೀಡುವುದಾಗಿಯೇ ಹೇಳುತ್ತಿರುವ ಭಾರತವು ದೇಶದೊಳಗಿನ ಜನರನ್ನು ಎಚ್ಚರಿಸುವ ಸಲುವಾಗಿ ಅಣಕು ಕವಾಯತು ಪ್ರದರ್ಶನಗಳನ್ನು ಆಯೋಜಿಸುತ್ತಿದೆ. ಮೇ 7ರ ಬುಧವಾರ ಅಣಕು ಕವಾಯತು ಪ್ರದರ್ಶನ ದೇಶಾದ್ಯಂತ ನಡೆಯಲಿವೆ.ವಾಯುದಾಳಿ ಸೈರನ್‌ಗಳನ್ನು ಸಕ್ರಿಯಗೊಳಿಸುವುದು, ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಮೂಲಭೂತ ಸ್ವರಕ್ಷಣೆಯಲ್ಲಿ ತರಬೇತಿ ನೀಡುವುದು, ಅಪಘಾತದ ಬ್ಲ್ಯಾಕೌಟ್ ಕ್ರಮಗಳನ್ನು ಪರಿಶೀಲಿಸುವುದು, ಪ್ರಮುಖ ಮೂಲಸೌಕರ್ಯಗಳನ್ನು ಮರೆಮಾಚುವುದು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ಪರಿಶೀಲಿಸುವುದು ಮತ್ತು ಪೂರ್ವಾಭ್ಯಾಸ ಮಾಡುವುದು ಈ ಅಣಕು ಕವಾಯತುಗಳಲ್ಲಿ ಸೇರಿವೆ ಎಂದು ANI ವರದಿ ಮಾಡಿದೆ.

Published by HT Digital Content Services with permission from HT Kannada....