Bangalore, ಮೇ 13 -- ಮೇ 15ರಂದು ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಹುಟ್ಟುಹಬ್ಬ. ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಭಾರತವು ಆಪರೇಷನ್‌ ಸಿಂದೂರ ಕೈಗೊಂಡಾಗ ಮಾಧುರಿ ದೀಕ್ಷಿತ್‌ ಕೂಡ ಸುದ್ದಿಯಲ್ಲಿದ್ದರು. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೈನಿಕರು ಮಾಧುರಿ ದೀಕ್ಷಿತ್‌ರನ್ನು ಕೇಳಿರುವ ಸುದ್ದಿ ಮತ್ತೆ ಇತ್ತೀಚೆಗೆ ವೈರಲ್‌ ಆಗಿತ್ತು. 1999ರಲ್ಲಿ ಕಾರ್ಗಿಲ್‌ ಯುದ್ಧ ನಡೆದ ಸಮಯದಲ್ಲಿ ಯುದ್ಧವನ್ನು ನಿಲ್ಲಿಸಲು ಪಾಕಿಸ್ತಾನಿ ಸೈನಿಕರು ಯಾರೂ ಊಹಿಸಲು ಸಾಧ್ಯವಿರದ ವಿಚಿತ್ರ ಬೇಡಿಕೆಯನ್ನುಇಟ್ಟಿದ್ದರು.

ಆ ಸಮಯದಲ್ಲಿ ಮಶ್ಕೋಹ್ ಹೈಟ್ಸ್‌ನಲ್ಲಿರುವ ಪಾಯಿಂಟ್ 4875 ಸಂಕೀರ್ಣದಲ್ಲಿ ಭಾರತೀಯ ಪಡೆಗಳು ಪಾಕಿಸ್ತಾನಿ ಬಂಕರ್‌ಗಳನ್ನು ಕ್ಲೋಸ್‌ ಮಾಡಿದ್ದವು. ಗುಂಡಿನ ದಾಳಿಗೆ ತುಸು ಬ್ರೇಕ್‌ ನೀಡಲಾಗಿತ್ತು. ಅಲ್ಲಿ ಎರಡೂ ಕಡೆಯವರೂ ಪಂಜಾಬಿ ಭಾಷೆ ಮಾತನಾಡುತ್ತಿದ್ದರು.

ಇಂತಹ ಸಮಯದಲ್ಲಿ ಎರಡೂ ಕಡೆಯ ಸೈನಿಕರು ಪರಸ್ಪರ ನಿಂದನೆ ಮಾಡುವುದು, ಕೆಟ್ಟದ್ದಾಗಿ ಮಾತನಾಡುವುದು ಸಾಮಾನ್ಯವಾಗಿತ್ತು. ಇದೇ ಸಮಯದಲ್ಲಿ ಕೆಲವೊಂದು...