ಭಾರತ, ಮೇ 14 -- ತಮ್ಮನ್ನು ತಾವು "ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ" ಎಂದೆಲ್ಲ ಟೀಕಿಸಿಕೊಳ್ಳುವ ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ʻತುಯ್ತವೆಲ್ಲ ನವ್ಯದತ್ತ ಅದರತ್ತರ ಉಯ್ಯಾಲೆ ಮತ್ತ ಅದರ ಸುತ್ತ..ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ವಿ.ಎಂ. ಇನಾಂದಾರ್‌ ಪ್ರಶಸ್ತಿ ಪುರಸ್ಕಾರ ಲಭ್ಯವಾಗಿದೆ. ಇದನ್ನೇ ನೆವವಾಗಿಸಿಕೊಂಡು ರಘುನಂದನ ಅವರ ವ್ಯಕ್ತಿ-ಕೃತಿ-ಸಂಸ್ಕೃತಿಯ ಇಣುಕು ನೋಟ ಬೀರುವ ಪ್ರಯತ್ನವಿದು.

ಪ್ರಶಸ್ತಿಗಳು, ಅಧಿಕಾರಸ್ಥ ಸ್ಥಾನಗಳು ಬಿಕರಿಯಾಗುತ್ತಿರುವ ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ʻʻಪಾತ್ರʼ ರಿಗೆ ಅವರ ಜ್ಞಾನಾಧಾರಿತ ಪ್ರಶಸ್ತಿಗಳ ಬಂದಾಗ ಅಚ್ಚರಿಯಾಗುತ್ತದೆ. ಆದರೆ ಅದು ಮಾಧ್ಯಮಗಳಿಗೆ ಸುದ್ದಿಯಾಗುವುದೇ ಇಲ್ಲ. ಏಕೆಂದರೆ ಇಂಥ ಪ್ರಶಸ್ತಿಗಳನ್ನು ಪಡೆದುಕೊಂಡವರಿಂದ, ಅಥವ ಇಂಥ ಸ್ಥಾನಗಳಿಗೆ ಯಾವುದೇ ರೀತಿಯಲ್ಲೂ, ಪ್ರಭಾವ ಬೀರದೆ ಆಯ್ಕೆಯಾಗಿರುವವರಿಂದ ಯಾರಿಗೂ ಲಾಭವಿಲ್ಲ ಮತ್ತು ನಷ್ಟವೂ ಇ...