ಭಾರತ, ಮಾರ್ಚ್ 19 -- ಹಾಸನ: ತೋಟದ ಬಳಿಗೆ ಬಂದ ಕಾಳಿಂಗ ಸರ್ಪವೊಂದರ ಜೊತೆ ಹೋರಾಡಿ, ಮನೆ ಮಾಲೀಕರು ಹಾಗೂ ಕೆಲಸಗಾರರನ್ನು ರಕ್ಷಿಸುವ ಜೊತೆಗೆ ತಾನು ಪ್ರಾಣ ತ್ಯಾಗ ಮಾಡಿದ ನಾಯಿಯೊಂದರ ವಿಡಿಯೊ ಈಗ ವೈರಲ್ ಆಗುತ್ತಿದೆ. ಹಾವಿನ ಜೊತೆ ದೀರ್ಘಕಾಲ ಸೆಣಸಾಡಿದ ನಾಯಿ ಅದನ್ನು ಸಾಯಿಸಿ, ನಾನು ಸತ್ತಿದೆ. ಆ ಮೂಲಕ ಹಲವರ ಪ್ರಾಣ ಉಳಿಸಿದೆ.
ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಕಟ್ಟಾಯ ಗ್ರಾಮದಲ್ಲಿ. ಶಮಂತ್ ಎನ್ನುವವರ ತೋಟದಲ್ಲಿ ಪಿಟ್ಬುಲ್ ಹಾಗೂ ಡಾಬರ್ಮನ್ ತಳಿಯ ನಾಯಿಗಳನ್ನು ಸಾಕಿದ್ದರು. ತೋಟದಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದ ಸಂದರ್ಭ ಶಬ್ದ ಕೇಳಿ ತೋಟದೊಳಗೆ ಬಂದಿತ್ತು ಬಿಳಿ ಬಣ್ಣದ ಕಾಳಿಂಗ ಸರ್ಪ. ತೆವಳುತ್ತಾ ಮನೆ ಬಳಿಗೆ ಬಂದಾಗ ಹೊರಗಡೆ ಮಕ್ಕಳು ಆಟವಾಡುತ್ತಿದ್ದರು. ಅವರನ್ನು ನೋಡಿ ತೆಂಗಿನಗರಿಗಳ ಕೆಳಗೆ ಹೋಗಿತ್ತು ವೈಟ್ ಕೋಬ್ರಾ. ಅದನ್ನು ಕಂಡ ನಾಯಿಗಳು ಗರಿಗಳ ಅಡಿಯಿಂದ ನಾಯಿಯನ್ನು ಎಳೆದು ತಂದು, ಅದರ ಜೊತೆ ಸೆಣಸಾಡಲು ಆರಂಭಿಸಿದ್ದವು. ಈ ವೇಳೆ ಭೀಮಾ ಹೆಸರಿನ ಪಿಟ್ಬುಲ್ ನಾಯಿಯ ಮುಖದ ಭಾಗಕ್ಕೆ ಒಂದು ಬಾರಿ ಕಚ್ಚ...
Click here to read full article from source
To read the full article or to get the complete feed from this publication, please
Contact Us.