ಭಾರತ, ಮೇ 6 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 5ರ ಸಂಚಿಕೆಯಲ್ಲಿ ಶ್ರಾವಣಿ ನಿಯೋಜಿಸಿದ್ದ ಡಿಟೆಕ್ಟರ್ ಕಡೆಯಿಂದ ಕಾಂತಮ್ಮ-ಸುಂದರ ಮಾಡುತ್ತಿರುವ ಕೆಲಸದ ಹಿಂದಿನ ಸತ್ಯ ಬಯಲಾಗಿದೆ. ಅಪ್ಪನ ಹೆಸರಿನಲ್ಲಿ ಸ್ಕ್ಯಾಮ್ ಮಾಡುತ್ತಿರುವುದು ಕಾಂತಮ್ಮ-ಸುಂದರ ಅನ್ನೋದು ಶ್ರಾವಣಿಗೆ ತಿಳಿಯುತ್ತದೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕೆ ನಿರ್ಧಾರ ಮಾಡುತ್ತಾಳೆ.

ವಂದನಾ ಆರೋಗ್ಯದ ಬಗ್ಗೆ ಚಿಂತಿಸುತ್ತಾ ಮಾತನಾಡುತ್ತಿರುವ ವೀರೇಂದ್ರ-ಸುರೇಂದ್ರ ಬಳಿಗೆ ಬರುತ್ತಾಳೆ ವಿಜಯಾಂಬಿಕಾ. ವಂದನಾ ಸ್ಥಿತಿ ಈಗಲೂ ಹಾಗೆ ಇದೇ ಎಂದು ಸುರೇಂದ್ರ ಹೇಳಿದಾಗ ಬೇರೆ ಡಾಕ್ಟರ್‌ಗೆ ತೋರಿಸೋಣ ಎಂದು ವೀರೇಂದ್ರ ಕೇಳುತ್ತಾನೆ. ಆಗ ಗಾಬರಿಗೊಳ್ಳುವ ವಿಜಯಾಂಬಿಕಾ 'ಅಯ್ಯೋ ವೀರು, ಅದೆಲ್ಲಾ ಏನು ಬೇಡ. ನಾನು ಈಗ ತೋರಿಸಿರುವುದು ನಂಬರ್ ಒನ್ ಸೈಕ್ಯಾಟಿಸ್ಟ್‌. ಅವರು ಈಗಷ್ಟೇ ಟ್ರೀಟ್‌ಮೆಂಟ್ ಶುರು ಮಾಡಿದ್ದಾರೆ. ವಂದನಾ ಬೇಗ ಸರಿ ಹೋಗುತ್ತಾಳೆ. ನೀವೇನೂ ಚಿಂತೆ ಮಾಡ್ಬೇಡಿ, ಅವಳ ಸಂ‍ಪೂರ್ಣ ಜವಾಬ್ದಾರಿ ನನ್ನದು' ಎಂದು ನಾಟಕ ಮಾಡುತ್ತಾಳೆ. ಸುರೇಂದ್ರನಿಗೂ ಕ...