Bengaluru, ಮೇ 19 -- ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸವು ಅತಿ ಮುಖ್ಯವಾಗುತ್ತದೆ. ಆದರೆ ಸಾಮಾನ್ಯವಾಗಿ ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಆದ್ದರಿಂದಲೇ ಸಾಮಾನ್ಯವಾಗಿ ವಿದ್ಯಾ-ಬುದ್ಧಿ ಎಂಬ ಜೋಡಿ ಪದವನ್ನು ಉಪಯೋಗಿಸುತ್ತೇವೆ. ಉತ್ತಮ ವಿದ್ಯೆ ಗಳಿಸಲು ಗುರುಗಳ ಅನುಗ್ರಹ ಇರಬೇಕು. ಶ್ರೀ ದಕ್ಷಿಣ ಮೂರ್ತಿಯನ್ನು ಸಹ ಗುರುಗಳೆಂದು ಸ್ವೀಕರಿಸಿದ್ದೇವೆ. ಪ್ರತಿಯೊಂದು ವಿದ್ಯೆಗೂ ಶ್ರೀ ಪರಮೇಶ್ವರನೇ ಮೂಲವಾಗುತ್ತಾನೆ. ದಕ್ಷಿಣಾಮೂರ್ತಿಯು ಭಗವಾನ್ ಪರಶಿವನ ಒಂದು ಅಂಶ. ಆದ್ದರಿಂದ ಎಲ್ಲಾ ರೀತಿಯ ವಿದ್ಯೆ, ಬುದ್ದಿ ಮತ್ತು ಜ್ಞಾನಕ್ಕೆ ದಕ್ಷಿಣಾಮೂರ್ತಿಯನ್ನು ಪೂಜಿಸುವುದು ಶ್ರೇಯಸ್ಕರ. ಇಲ್ಲಿ ದೇವರನ್ನು ಪೂಜಿಸುವುದರಿಂದ, ಆರಾಧಿಸುವುದರಿಂದ ಉನ್ನತ ಮಟ್ಟದ ಅರಿವು ಮತ್ತು ತಿಳುವಳಿಕೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶಿವನ ಅಂಶವಾದ ದಕ್ಷಿಣಾಮೂರ್ತಿಯು ಪ್ರಾಚೀನ ಕಲೆಗಳಾದ ಯೋಗ, ಸಂಗೀತ, ನಾಟ್ಯ ಮತ್ತು ಬುದ್ಧಿವಂತಿಕೆಯನ್ನು ಕರುಣಿಸುವ ಶಿಕ್ಷಕನಾಗಿದ್ದಾನೆ. ಬುದ್ಧಿಮತ್ತೆಯ ದೇವರೆಂದೇ ನಂಬುತ್ತಾರೆ. ಧರ್ಮಗ್ರಂಥಗಳ...