Bengaluru, ಮೇ 24 -- ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾದ ಜಾತಿಗಣತಿ ಕುರಿತು ರಾಜ್ಯ ಜನತೆಯಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಉಂಟಾಗುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಹೈದರಾಬಾದ್‌ ಮೂಲದ ಸಂಸ್ಥೆಯೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸಿತ್ತು. ಆದರೆ ಕಾಂಗ್ರೆಸ್‌ ಸರ್ಕಾರಕ್ಕೆ ಶೇ. 48.4ರಷ್ಟು ಜನರು ಉತ್ತಮ ಎಂದಿದ್ದರೆ ಶೇ.32ರಷ್ಟು ಜನರು ದುರ್ಬಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26.3 ಮತದಾರರು ಜಾತಿ ಗಣತಿಯನ್ನು ಒಪ್ಪಿಕೊಂಡಿದ್ದರೆ ಶೇ.35 ರಷ್ಟು ಜನತೆ ಒಪ್ಪಿಕೊಂಡಿಲ್ಲ. ಶೇ.16 ರಷ್ಟು ಜನ ಸಂಶಯ ವ್ಯಕ್ತಪಡಿಸಿದ್ದಾರೆ.

ಪೀಪಲ್ಸ್‌ ಪಲ್ಸ್‌ ಪೊಲಿಟಿಕಲ್‌ ರೀಸರ್ಚ್‌ ಆರ್ಗನೈಸೇಷನ್‌ ಮತ್ತು ಕೊಡೆಮೊ ಟೆಕ್ನಾಲಜೀಸ್‌ ಜಂಟಿಯಾಗಿ ಏಪ್ರಿಲ್‌ 17 ರಿಂದ ಮೇ 18 ರವರೆಗೆ ಸಮೀಕ್ಷೆ ನಡೆಸಿತ್ತು. ಗ್ರಾಮೀಣ ನಗರ ಎರಡೂ ಭಾಗದ 10,481 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮ...