Bengaluru, ಮೇ 20 -- ಕರ್ನಾಟಕದ ರಾಜಧಾನಿ ಬೆಂಗಳೂರು ಇನ್ನೂ ಬೆಳೆಯುತ್ತಲೇ ಇದೆ. ಈ ವೇಗಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಕಡೆಗೆ ಸರ್ಕಾರ ಗಮನಹರಿಸಿಲ್ಲ. ಎರಡನೇ ಸ್ತರ ಮತ್ತು ಮೂರನೇ ಸ್ತರದ ನಗರಗಳ ಅಭಿವೃದ್ಧಿ ಕಡೆಗೂ ಅಗತ್ಯ ಗಮನಹರಿಸಿಲ್ಲ ಎಂಬುದು ವೇದ್ಯ ವಿಚಾರ. ಈ ನಡುವೆ, ನಗರದ ಕಳಪೆ ರಸ್ತೆಗಳ ಕಾರಣ ಬೆನ್ನು ನೋವು ಶುರುವಾಗಿದೆ. ಮಾನಸಿಕವಾಗಿಯೂ ಕುಗ್ಗಿದ್ದೇನೆ. ಪರಿಹಾರವಾಗಿ 50 ಲಕ್ಷ ರೂಪಾಯಿ ನೀಡಬೇಕು ಎಂದು ಬೆಂಗಳೂರಿಗನೊಬ್ಬ ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸದ್ದು ಈಗ ಗಮನಸೆಳೆದಿದೆ.

ಮಹಾನಗರದ ಕಳಪೆ ರಸ್ತೆಗಳ ಕಾರಣ ಬೆನ್ನು ನೋವು ಶುರುವಾಗಿದೆ. ಮಾನಸಿಕವಾಗಿಯೂ ಕುಗ್ಗಿದ್ದೇನೆ. ಅದ್ದರಿಂದ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ರಿಚ್ಮಂಡ್ ಟೌನ್‌ನ 43 ವರ್ಷದ ವ್ಯಕ್ತಿಯೊಬ್ಬರು ಲೀಗಲ್ ನೋಟಿಸ್ ಕಳುಹಿಸಿದ್ದು ಗಮನಸೆಳೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಧಿವ್ಯ ಕಿರಣ್ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ವ್ಯಕ್ತಿ, ತಾನು ನಿಯತವಾಗಿ...