ಭಾರತ, ಮೇ 1 -- ಕಲಬುರಗಿಯ ಪಂಡಿತ ರಂಗಮಂದಿರದ ಎದುರು ಪ್ರಿಯಾಂಕ್ ಖರ್ಗೆಯವರ ಪ್ರೇರಣೆಯಿಂದ ಸಚಿನ್ ಸಿರ್ವಾಳ ಎನ್ನುವ ಯುವಕ 'ಓಪನ್ ಲೈಬ್ರರಿ' ಆರಂಭಿಸಿ ಒಂದಷ್ಟು ಪುಸ್ತಕಗಳನ್ನು ಇಟ್ಟಿದ್ದಾರೆ. ಅದು ಪುಸ್ತಕ ಪ್ರಿಯರ ಆಕರ್ಷಣೆಯಾಗಿದೆ. ಈ ನಡುವೆ, ಪ್ರೀವೆಡ್ಡಿಂಗ್ ಶೂಟ್ ತಾಣವಾಗಿ ಕೂಡ ಬಳಕೆಯಾಗಿದೆ.
ಅರಿವು ಓಪನ್ ಏರ್ ಲೈಬ್ರರಿಯಲ್ಲಿ ಓದಲು ಬೆಂಚ್ ಕೂಡ ಇರುವುದರಿಂದ ಶಾಲಾ ಕಾಲೇಜಿನ ಮಕ್ಕಳು, ಬಸ್ ಕಾಯುವ ದಾರಿ ಹೋಕರು ಪುಸ್ತಕ ಮುಟ್ಟಿ..ಚೂರು ಓದಿ ಮುಂದೆ ಹೋಗುತ್ತಾರೆ. ಈ ಸ್ಥಳದಲ್ಲಿಯೇ ಏಪ್ರಿಲ್ 27 ರಂದು ಬೆಳಿಗ್ಗೆ ನವಜೋಡಿಯೊಂದು ಫೋಟೋ ತೆಗೆಸಿಕೊಳ್ಳುತ್ತಿತ್ತು.
ಕುತೂಹಲದಿಂದ ವಿಚಾರಿಸಿದಾಗ, ಕಲಬುರಗಿ ನಿವಾಸಿಗಳಾದ ಪ್ರವೀಣ್ ಚಹ್ವಾಣ್-ನಿಶಾ ಪ್ರೀ ವೆಡ್ಡಿಂಗ್ ಶೂಟ್ ನಡೆಸುತ್ತಿರುವುದು ಎಂಬುದು ತಿಳಿಯಿತೆಂದು ಅರುಣ್ ಜೋಳದ ಕೂಡ್ಲಿಗಿ ವಿವರಿಸಿದ್ದಾರೆ.
ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವಾಗ ಈ ಓಪನ್ ಲೈಬ್ರರಿ ಗಮನಸೆಳೆದಿದೆ. ಅರೆ ಪುಸ್ತಕ ಓದುವ ಹಾಗೆ ಯಾಕೆ ಶೂಟ್ ಮಾಡಿಸಬಾರದು ಅನ್ನಿಸಿದೆ. ಫೋಟೋಗ್ರಾಫರ್ಗೂ ಇ...
Click here to read full article from source
To read the full article or to get the complete feed from this publication, please
Contact Us.