Bangalore, ಮೇ 20 -- ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆಗಳ ಗಣತಿ ಮೇ 23ಕ್ಕೆ ಆರಂಭವಾಗಲಿದ್ದು, ಮೂರು ದಿನಗಳ ಕಾಲ ಆನೆಗಳ ಲೆಕ್ಕ ಹಾಕಲಾಗುತ್ತದೆ.

ಅಖಿಲ ಭಾರತ ಆನೆ ಗಣತಿಯನ್ನು ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಹುಲಿ ಗಣತಿಯಂತೆಯೇ ವಾರ್ಷಿಕವಾಗಿ ಆನೆ ಗಣತಿಯನ್ನೂ ನಡೆಸಲಾಗುತ್ತಿದೆ. ದಕ್ಷಿಣ ಕರ್ನಾಟಕದ ಕೇರಳ, ಕರ್ನಾಟಕ ಹಾಗೂ ತಮಿಳುನಾಡು ಭಾಗದಲ್ಲಿ ಆನೆ ಕಾರಿಡಾರ್‌ ನಂಟು ಇರುವುದರಿಂದ ಗೊಂದಲ ತಪ್ಪಿಸಲು ಮೂರು ರಾಜ್ಯದಲ್ಲೂ ಆನೆ ಗಣತಿ ನಡೆಸಲಾಗುತ್ತದೆ.

2024 ರಲ್ಲಿ ಬಂಡೀಪುರದಲ್ಲಿ ನಡೆದಿದ್ದ ಪ್ರಮುಖರ ಸಭೆಯಲ್ಲಿ ದಕ್ಷಿಣ ಆನೆ ರಾಜ್ಯಗಳನ್ನು ಗಣತಿ ಕಾರ್ಯಕ್ರಮದಲ್ಲಿ ಒಳಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದರ ನಂತರ, 2024 ರಲ್ಲಿ ಮೊದಲ ಸಂಯೋಜಿತ ಅಂದಾಜು ಗಣತಿ ಮಾಡಲಾಯಿತು. ಇದಕ್ಕೆ ಕರ್ನಾಟಕ ಮುಂದಾಳತ್ವ ವಹಿಸಿತ್ತು.

ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದ ಸ್...