Vijayapura, ಮೇ 7 -- ವಿಜಯಪುರ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆಸಿದ ಉಗ್ರರ ದಾಳಿ ನಂತರ ಭಾರತವೂ ಆಪರೇಷನ್‌ ಸಿಂಧೂರ ಎನ್ನುವ ಹೆಸರಿನಲ್ಲಿ ಉತ್ತರವನ್ನೇ ಬುಧವಾರ ಬೆಳ್ಳಂಬೆಳಿಗ್ಗೆ ನೀಡಿದೆ. ಸಿಂಧೂರ ಎನ್ನುವ ಕುರಿತು ಎಲ್ಲೆಡೆ ವ್ಯಾಪರ ಚರ್ಚೆಯೂ ನಡೆದಿದೆ. ಅದರಲ್ಲೂ ಕುಟುಂಬದವರೇ ಇದ್ದ, ಪುರುಷರನ್ನೇ ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ದಾಳಿ ಅದಾಗಿತ್ತು. ಈ ಕಾರಣದಿಂದಲೇ ಈಗ ನಡೆಸಿದ ಉಗ್ರರ ಮೇಲಿನ ದಾಳಿಯ ಕಾರ್ಯಾಚರಣೆಗೆ ನೀಡಿದ್ದು ಆಪರೇಷನ್ ಸಿಂಧೂರ. ಅದರಲ್ಲೂ ಪತಿಯನ್ನು ಕಳೆದುಕೊಂಡ ಹೆಣ್ಮಕ್ಕಳ ಆತ್ಮಾಭಿಮಾನ ಹೆಚ್ಚಿಸುವ ದಾಳಿಯಿದು. ಆಪರೇಷನ್‌ ಸಿಂಧೂರ ಎಂದ ತಕ್ಷಣ ನೆನಪಾಗಿದ್ದು ಸಿಂಧೂರ ಲಕ್ಷ್ಮಣ ಎಂಬ ಕರ್ನಾಟಕ- ಮಹಾರಾಷ್ಟ್ರ ಭಾಗದ ಗಡಿ ಹೋರಾಟಗಾರ. ಸಿಂಧೂರ ಲಕ್ಷ್ಮಣ ಕುರಿತು ಕನ್ನಡದಲ್ಲಿ ಚಿತ್ರವೂ ಬಂದಿದೆ.ನಾಟಕಗಳೂ ಕೂಡ ಜನಪ್ರಿಯವಾಗಿವೆ.

ಲಕ್ಷ್ಮಣ ಎಂಬ ಅಪ್ರತಿಮ ಹೋರಾಟಗಾರನ ಹೆಸರಿನ ಹಿಂದೆ ಸೇರಿಕೊಂಡ ಸಿಂಧೂರ ಎನ್ನುವ ಮೂಲ ಯಾವುದು. ಈಗಿನ ಆಪರೇಷನ್‌ ಸಿಂಧೂರಕ್ಕೂ ಏನಾದರೂ ನಂಟು ಇರಬಹುದೇ ಎನ್ನುವ ಪ್...