ಕರ್ನಾಟಕ ಬಜೆಟ್ 2024 Live: 15ನೇ ಬಾರಿ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಸಿದ್ಧ; ಲೋಕಸಭೆ ಚುನಾವಣೆ ನೆರಳು, ಗ್ಯಾರೆಂಟಿಗಳ ಅನುಷ್ಠಾನದ ಸವಾಲು
Bengaluru, ಫೆಬ್ರವರಿ 16 -- ಕರ್ನಾಟಕ ಬಜೆಟ್ 2024: ಕರ್ನಾಟಕ ಸರ್ಕಾರದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ (ಫೆ 16) ಕರ್ನಾಟಕದ 2024-25ನೇ ಹಣಕಾಸು ವರ್ಷದ ಬಜೆಟ್ (Karnataka Budget 2024) ಮಂಡಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರೆಂಟಿಗಳು ಜನರ ಗಮನ ಸೆಳೆದಿದ್ದವು. ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದವು. ಜನಪ್ರಿಯ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಮತ್ತು ಯುವನಿಧಿ ಈಗಾಗಲೇ ಜಾರಿಯಾಗಿದೆ. ಇನ್ನೊಂದು ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ ಕರ್ನಾಟಕದ ಬಜೆಟ್ನಲ್ಲಿ ಈ ಬಾರಿ ಘೋಷಣೆಯಾಗುವ ಯೋಜನೆಗಳು ದೇಶದ ಇತರ ರಾಜ್ಯಗಳಲ್ಲಿಯೂ ಕಾಂಗ್ರೆಸ್ಗೆ ಆಸರೆಯಾಗಬಹುದು ಎಂಬ ವಿಶ್ಲೇಷಣೆಗಳಿವೆ. ನಿರೀಕ್ಷೆಯಂತೆ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಬರ...
Click here to read full article from source
To read the full article or to get the complete feed from this publication, please
Contact Us.