Mysuru, ಮೇ 12 -- ಮೈಸೂರಿಂದ ಸುಮಾರು 85 ಕಿ.ಮಿ ದೂರದಲ್ಲಿರುವ ಟಿಬೆಟಿಯನ್ನರ ನಿರಾಶ್ರಿತ ತಾಣ ಬೈಲಕುಪ್ಪೆಯಲ್ಲಿ ಗೋಲ್ಡನ್ ಟೆಂಪಲ್ ವಿಶೇಷ ರೀತಿಯಲ್ಲಿಯೇ ಇದೆ. ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು ಇಪ್ಪತ್ತು ಸಾವಿರ ಟಿಬೆಟಿಯನ್ನರು ಐದು ದಶಕದಿಂದ ಇಲ್ಲಿದ್ದಾರೆ.
ಟಿಬೆಟ್ ನಿರಾಶ್ರಿತರ ಶಿಬಿರವು ಸ್ವರ್ಣ ದೇಗುಲ ಸೇರಿದಂತೆ ಸುಮಾರು ಹದಿನೇಳಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ ಇಲ್ಲಿ ಒಂದಕ್ಕಿಂತ ಆಕರ್ಷಕವಾಗಿವೆ. ನಾಲ್ಕೂವರೆ ದಶಕದ ಹಿಂದೆಯೇ ಇದು ನಿರ್ಮಾಣಗೊಂಡಿದೆ.
ಸ್ವರ್ಣ ದೇವಾಲಯವು ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ. ಬುದ್ದನ ಕರುಣೆಯ ನೋಟವು ಚಿನ್ನದ ಲೇಪನದೊಂದಿಗೆ ಹೊಳೆಯುತ್ತಿದೆ,
ವಿಶಾಲ ಹಜಾರ ಹೊಂದಿರುವ ದೇವಾಲಯದ ಪೀಠದಿಂದಲೇ 60 ಅಡಿ ಎತ್ತರದ ಬುದ್ದನ ಮೂರ್ತಿ, 58 ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್ ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋ...
Click here to read full article from source
To read the full article or to get the complete feed from this publication, please
Contact Us.