Dakshina kannada, ಮೇ 3 -- ರುದ್ರಯಾಗ, ಶತರುದ್ರಯಾಗ, ಅತಿರುದ್ರಯಾಗ ಖಾಸಗಿಯಾಗಿಯೋ ಅಥವಾ ಮಠ, ಮಂದಿರಗಳ ಪ್ರಾಯೋಜಕತ್ವದಲ್ಲಿ ನಡೆಯುವುದುಂಟು. ಆದರೆ ಸಾರ್ವಜನಿಕವಾಗಿ ಅತಿಮಹಾರುದ್ರಯಾಗವೊಂದು ನಡೆಯುತ್ತಿರುವುದು ವಿರಳ. ದಕ್ಷಿಣ ಭಾರತದಲ್ಲೇ ಮೊದಲು ಎಂಬಂತೆ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಳ್ಳಿಯೊಂದರಲ್ಲಿ ಇರುವ ನಿಟಿಲಾಪುರ ಸದಾಶಿವ ರುದ್ರ ದೇವಸ್ಥಾನದಲ್ಲಿ ಸಾರ್ವಜನಿಕರೆಲ್ಲ ಸೇರಿ ಅತಿಮಹಾರುದ್ರಯಾಗವನ್ನು ನಡೆಸುತ್ತಿದ್ದಾರೆ. ಮೇ.2ಕ್ಕೆ ಯಾಗದ ಪ್ರಕ್ರಿಯೆಗಳು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ.

ಕಾಶಿ ಸಂಸ್ಥಾನ ಮಠಾಧೀಶ್ವರ ಶ್ರೀ 1008 ಜಗದ್ಗುರು ಕಾಶೀಪೀಠ ವಾರನಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, 24 ಸಂತರು ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ

ಈಗಾಗಲೇ 11 ಹೋಮಕುಂಡಗಳನ...