Bangalore, ಮೇ 15 -- ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆಯಿಂದ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸರ್ಕಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ಮತದಾರರ ಮೇಲೆ ತೆರಿಗೆ ಹೊರೆಯನ್ನು ವರ್ಗಾಯಿಸುವ ಸುಲಭ ಮಾರ್ಗವನ್ನು ಬಿಟ್ಟು ಜನಸಾಮಾನ್ಯರಿಗೆ ಹೊರೆಯಾಗದ ಹಾಗೆ ಏನು ಮಾಡಬಹುದು ಎಂಬ ಮಾರ್ಗಗಳನ್ನು ಕುಇತು ಚಿಂತಸಿಲು ಹೋಗುವುದೇ ಇಲ್ಲ. ಬೆಲೆ ಏರಿಕೆ ಪಟ್ಟಿಗೆ ಹೊಸ ಸೇರ್ಪಡೆ ಬಿಯರ್‌ ಬೆಲೆ. ರಾಜ್ಯ ಸರ್ಕಾರ ಬಿಯರ್‌ ಬೆಲೆ ಏರಿಸಿ ಆಧಿಕೃತವಾಗಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತಕ್ಕೆ ಬಂದ ನಂತರ ಬಿಯರ್ ಬೆಲೆಯನ್ನು ನಾಲ್ಕನೇ ಬಾರಿಗೆ ಏರಿಸಲಾಗಿದೆ. ಅದೂ ಎರಡು ವರ್ಷಗಳ ಅವಧಿಯಲ್ಲಿ ಎನ್ನುವುದು ಗಮನಾರ್ಹ. ಪ್ರಸ್ತುತ ಬಿಯರ್‌ ಮೇಲೆ ಶೇ.195 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದ್ದು ಇದೀಗ ಶೇ.200 ರಷ್ಟು ಹೆಚ್ಚಳ ಮಾಡಲಾಗಿದೆ. ಮತ್ತೆ ಹೆಚ್ಚುವರಿಯಾಗಿ ಶೇ. 10ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಈ ಮೂಲಕ ಅಬಕಾರಿ ಸುಂಕ ಶೇ.205 ರಷ್ಟು ಹೆಚ್ಚಳವಾಗಿದೆ. ಅಂದರೆ ಪ್ರತ...