Bengaluru, ಏಪ್ರಿಲ್ 27 -- ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ ಭಾರತದ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಾಣಿಜ್ಯ ಸಂಸ್ಥೆಗಳ ಚಾವಣಿ ಮೇಲೆ ಸೌರಶಕ್ತಿ ಫಲಕಗಳನ್ನು (ಸೋಲಾರ್‌ ಪ್ಯಾನೆಲ್) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಇದನ್ನು ಗಂಭಿರವಾಗಿ ಪರಿಗಣಿಸಿದ ಇಲಾಖೆಗಳು ತುಂಬಾ ಕಡಿಮೆ. ರಾಜ್ಯದಲ್ಲಿ ಹೆಚ್ಚಿನ ಯಾವುದೇ ಕಚೇರಿಗಳು ಸೋಲಾರ್‌ ಪ್ಯಾನೆಲ್‌ ಅಳವಡಿಕೆಗೆ ಆಸಕ್ತಿ ತೋರಿಲ್ಲ. ಸ್ವಂತ ಬಳಕೆಗೆ ವಿದ್ಯುತ್‌ ಉತ್ಪಾದನೆ ಮಾಡಬಹುದಾದ ಆಯ್ಕೆ ಹಾಗೂ ಅವಕಾಶ ಸರ್ಕಾರಿ ಇಲಾಖೆಗಳಿಗೆ ಇದೆ. ಆದರೆ, ಎಲ್ಲೂ ಆಸಕ್ತಿ ಕಾಣಿಸುತ್ತಿಲ್ಲ. ಸರ್ಕಾರದ ನಿಯಮಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಬೆಸ್ಕಾಮ್‌ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಮೇಲ್ಚಾವಣಿ ಸೋಲಾರ್‌ ಪ್ಯಾನೆಲ್‌ ಅಳವಡಿಸುವುದನ್ನು ಉತ್ತೇಜಿಸುವ ಮತ್ತು ಸಬ್ಸಿಡಿಗಳನ್ನು ನೀಡುವ ಮತ್ತು ಗ್ರಿಡ್-ಸಂಪರ್ಕಿತ ಸೌರ ಯೋಜನೆಗಳನ್ನು ನಿರ್ವಹಿಸುವಲ್ಲಿ ತೊಡಗಿರುವ ಸರ್ಕಾರಿ ಇಲಾಖೆಗಳಾಗಿವೆ.

2024ರ ಜು...