Hiriyur, ಏಪ್ರಿಲ್ 26 -- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಶೇ. 91ರಷ್ಟು ನೀರು ಜಲಾಶಯದಲ್ಲಿದೆ.

ಹಿರಿಯೂರು ತಾಲ್ಲೂಕಿನಲ್ಲಿರುವ ಹಸಿರು ಗುಡ್ಡಗಳ ನಡುವೆ ಇರುವ ಈ ಜಲಾಶಯದ ನೋಟವೂ ಚೆನ್ನಾಗಿದೆ. ಮೇಲ್ಭಾಗದಿಂದ ನೋಡಿದರೆ ಭಾರತದ ಬಾವುಟದಂತೆ ಕಾಣಿಸಲಿದೆ.

ಹಿರಿಯೂರಿನ ವಿ. ವಿ.ಪುರ ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಕಳೆದ ವರ್ಷ ಭರ್ತಿಯಾಗಿತ್ತು. ಈ ಕಾರಣದಿಂದ ಈ ಬಾರಿ ಜಲಾಶಯದಲ್ಲಿ ನೀರು ಈಗಲೂ ಇದೆ.

ವೇದಾವತಿ ನದಿಯು ವೇದ ಮತ್ತು ಆವತಿಯು ವೇದಾವತಿ ನದಿಯ ಎರಡು ಉಪನದಿಗಳು ಪಶ್ಚಿಮ ಘಟ್ಟಗಳಲ್ಲಿನ ಬಾಬಾಬುಡನ್‌ಗಿರಿ ಪರ್ವತಗಳಿಂದ ಉಗಮಿಸುತ್ತವೆ ಮತ್ತು ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹರಿಯುತ್ತವೆ.

ವಿವಿ ಸಾಗರ ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದ...