Bengaluru, ಮೇ 5 -- ಮಂಗಳೂರು: ಮಂಗಳೂರು ಹೊರವಲಯದಲ್ಲಿ ಅಶ್ರಫ್ ಎಂಬಾತನನ್ನು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದ ಪ್ರಕರಣ, ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ ಪ್ರಕರಣಗಳು ನಡೆದ ಬಳಿಕ ಮತ್ತೆ ನಾಲ್ವರ ವಿರುದ್ಧ ಹಲ್ಲೆ ನಡೆದ ಘಟನೆಗಳು ನಡೆದಿದ್ದು, ಇದೀಗ ಮತ್ತೆ ಇಬ್ಬರು ಪ್ರಮುಖ ಮುಖಂಡರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಸಂದೇಶಗಳು ಬಂದಿವೆ. ಈತನ್ಮಧ್ಯೆ ಸಾಮಾಜಿಕ ಜಾಲತಾಣವಾದ ಇನ್ಸ್‌ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಪರಸ್ಪರ ಅವಹೇಳನಕಾರಿ, ಬೆದರಿಕೆ ಸಂದೇಶಗಳ ವಿನಿಮಯವಾಗುತ್ತಿದ್ದು, ನಕಲಿ ಅಕೌಂಟ್‌ಗಳ ಮೂಲಕ ಧಮ್ಕಿ ಹಾಕುವ ಕಾರ್ಯಗಳು ನಡೆಯುತ್ತಿರುವುದು ಪೊಲೀಸರಿಗೆ ಸವಾಲಾಗಿದೆ. ಹಿಂದು ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಭರತ್ ಕುಮ್ಡೇಲು ವಿರುದ್ಧ ಹಾಕಿದ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ.

ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ ಸಹಸಂಚಾಲಕ ಶರಣ್ ಪಂಪ್‌ವೆಲ್, 2017ರಲ್ಲಿ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದ ಎಸ್.ಡಿ.ಪಿ.ಐ. ಮು...