ಭಾರತ, ಮಾರ್ಚ್ 20 -- ಮಂಗಳೂರು: ಬಿಸಿಗಾಳಿ ದಿನೇ ದಿನೇ ಏರುತ್ತಿದೆ. ಕರಾವಳಿಯಲ್ಲಿ 40 ಡಿಗ್ರಿಯಷ್ಟು ತಾಪಮಾನ ಇದೀಗ ಎಲ್ಲರ ಚಿಂತೆಗೆ ಕಾರಣವಾಗುತ್ತಿದೆ. ಜಿಲ್ಲಾಡಳಿತವಂತೂ ಹಲವಾರು ಸೂಚನೆಗಳನ್ನು ನೀಡುವುದರ ಮೂಲಕ ಜಾಗ್ರತೆ ವಹಿಸುವಂತೆ ಕೋರಿದೆ. ಜಾಗ್ರತೆಯ ನಡುವೆ ಜಾಗೃತಿಯನ್ನೂ ಮೂಡಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಶಿಕ್ಷಕ ರೋಷನ್ ಪಿಂಟೋ ಅವರ ಪರಿಕಲ್ಪನೆಯ ಈ ಅಭಿಯಾನದ ಹೆಸರು ಚೀಂವ್ ಚೀಂವ್ ಅಭಿಯಾನ. ಬೇಸಗೆಯಲ್ಲಿ ನಾವು ಯಾರನ್ನಾದರೂ ನೀರು ಕೇಳಬಹುದು. ಆದರೆ ಹಾಗೆ ಮಾಡಲು ಸಾಧ್ಯವಾಗದ ಪಕ್ಷಿಗಳು ಏನು ಮಾಡಬೇಕು? ನೀರಿದ್ದಲ್ಲಿಗೆ ಹೋಗಬೇಕು. ಹೀಗಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಹಾಗೆ ನೋಡಿದರೆ, ಈ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಹಕ್ಕಿಗಳಿಗೆ ನೀರಿಡುವ ಅಬಿಯಾನ ನಡೆಯುತ್ತಾ ಬಂದಿದೆ. ಆದರೆ ಈಗ ಹೀಟ್ ವೇವ್ ಆರಂಭಗೊಂಡ ಸಂದರ್ಭ, ನಮ್ಮಂತೆ ಹಕ್ಕಿಗಳೂ ಬದುಕಲಿ ಎ...
Click here to read full article from source
To read the full article or to get the complete feed from this publication, please
Contact Us.