Bengaluru, ಮೇ 22 -- ಎಪ್ಪತ್ತು-ಎಂಭತ್ತರ ದಶಕದಲ್ಲಿ, ಕಾಗದದಲ್ಲಿ ಪೆನ್ನಿನಲ್ಲಿ ಬರೆಯುತ್ತಿದ್ದ ಕಾಲದಲ್ಲಿ, ಪತ್ರಿಕೆಗಳಿಗೆ ಕಥೆ, ಕವನ, ಲೇಖನ ಕಳುಹಿಸಬೇಕಿದ್ದರೆ, ಕಾಗದದ ಒಂದೇ ಮಗ್ಗಲಿಗೆ, ಅಂದರೆ ಕಾಗದದ ಹಿಂದಿನ ಭಾಗದಲ್ಲಿ ಬರೆಯದೆ ಮುಂಭಾಗದಲ್ಲಿ ಮಾತ್ರ ಬರೆಯಬೇಕೆಂಬ ನಿಯಮವಿತ್ತು. ಕಾಗದದ ಒಂದೇ ಮಗ್ಗಲಿಗೆ ಬರೆಯುವುದೆಂದರೆ ಹೇಗೆಂದು ತಿಳಿಯದ ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬಳು ಇಂದು, ಸಾಹಿತ್ಯ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಬೆಳೆದು, ಇಂದು (ಬುಧವಾರ) ಮುಂಜಾನೆ ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ತಂದುಕೊಟ್ಟು, ಕನ್ನಡದ ಸಾಹಿತ್ಯ, ಸಂಸ್ಕೃತಿಯ ವೈವಿಧ್ಯತೆಯನ್ನು ಜಗದಗಲ ಮುಗಿಲಗಲಕ್ಕೆ ವಿಸ್ತರಿಸಿದ್ದಾರೆ. ಈಕೆ ನಮ್ಮ ನಡುವಿನ ಕವಿ, ಲೇಖಕಿ, ಸಣ್ಣ ಕತೆಗಾರ್ತಿ, ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಬಾನು ಮುಷ್ತಾಕ್.‌

ಸಾಹಿತ್ಯ ಲೋಕಕ್ಕೆ ನೀವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರೆ ಕಾಣಿಸುವ ಚಿತ್ರ ಯಾವುದು? ಎಂದು, ಬಾನು ಅವರ Heart Lamp ಅಂತಾರಾಷ್ಟ್ರೀಯ ಬೂಕರ್‌...