Bengaluru, ಮೇ 20 -- ಬೆಂಗಳೂರು: ನಾನು ಕನ್ನಡ ಮಾತನಾಡಲ್ಲ, ಐ ವಿಲ್ ನಾಟ್ ಸ್ಪೀಕ್ ಕನ್ನಡ, ಗೋ ಆಂಡ್ ಟೆಲ್ ಟು ಎಸ್ಬಿಐ ಚೇರ್ಮನ್ ಎಂದು ಗ್ರಾಹಕರೊಬ್ಬರಿಗೆ ಎಸ್ಬಿಐ ಬ್ಯಾಂಕಿನ ಮ್ಯಾನೇಜರ್ ಧಮಕಿ ಹಾಕಿರುವ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲ್ಲೂಕು ಸೂರ್ಯ ನಗರ ಎಸ್ಬಿಐ ಶಾಖೆಯ ಮ್ಯಾನೇಜರ್ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡದ ಬಗ್ಗೆ ಹೀಯಾಳಿಕೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಸೇವೆ ನೀಡಲು ನಿರಾಕರಿಸಿದ ಬ್ಯಾಂಕ್ ವ್ಯವಸ್ಥಾಪಕಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸೂರ್ಯ ನಗರ ಎಸ್ಬಿಐ ಶಾಖೆಯ ಮ್ಯಾನೇಜರ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಅದನ್ನು ಜನರು ಆರ್ಬಿಐ, ನಿರ್ಮಲಾ ಸೀತಾರಾಮನ್ಗೆ ಟ್ಯಾಗ್ ಮಾಡಿದ್ದಾರೆ. ಜತೆಗೆ ಭಾಷಾ ತಾರತಮ್ಯ, ಹಿಂದಿ ಹೇರಿಕೆ ಮತ್ತು ಕನ್ನಡದಲ್ಲಿ ಸೇವೆ ನಿರಾಕರಣೆಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.
ಎಸ್ಬಿಐ ಮ್ಯಾನೇಜರ್ ವರ್ತನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇ...
Click here to read full article from source
To read the full article or to get the complete feed from this publication, please
Contact Us.