ಭಾರತ, ಮೇ 30 -- ಕಳೆದೆರಡು ದಿನಗಳಿಂದ ಕಮಲ್‍ ಹಾಸನ್‍ ಅವರದ್ದೇ ಜೋರು ಸುದ್ದಿ. ಇತ್ತೀಚೆಗೆ, ಚೆನ್ನೈನಲ್ಲಿ ನಡೆದ 'ಥಗ್‍ ಲೈಫ್‍' ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ಕಾರ್ಯಕ್ರಮದಲ್ಲಿ 'ಕನ್ನಡವು ತಮಿಳಿನಿಂದ ಹುಟ್ಟಿತು .' ಎಂದು ಕಮಲ್‍ ಹಾಸನ್‍ ಹೇಳಿದ್ದು ಸಾಕಷ್ಟು ವಿವಾದವಾಗಿತ್ತು. ೀ ಬಗ್ಗೆ ಅವರು ಕ್ಷಮೆ ಕೇಳಬೇಕು ಎಂದು ಹಲವರು ಆಗ್ರಹಿಸಿದ್ದರು.

ಆದರೆ, ಕಮಲ್ ಹಾಸನ್‍ ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಕುರಿತು ಮಾತನಾಡಿರುವ ಅವರು, 'ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ' ಎಂದು ಹೇಳಿದ್ದರು.

ಕಮಲ್‍ ಹಾಸನ್‍ ವಿವಾದಾತ್ಮಕ ಹೇಳಿಕೆ ನೀಡುವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶಿವರಾಜಕುಮಾರ್ ಸಹ ಅಲ್ಲೇ ಇದ್ದರು. ಅವರ ಸಮ್ಮುಖದಲ್ಲೇ ಕಮಲ್‍ ಹಾಸನ್‍ ಹೀಗೆ ಮಾತನಾಡಿದ್ದರ ಬಗ್ಗೆ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ವಿಷಯವಾಗಿ ಶಿವರಾಜಕುಮಾರ...