ಭಾರತ, ಮೇ 2 -- ಯೂಟ್ಯೂಬರ್‌ ಧ್ರುವ ರಾಠಿ ಕನ್ನಡಿಗರ ವಿಚಾರದಲ್ಲಿ ವಿವಾದವೊಂದನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಧ್ರುವ ರಾಠೀಯ ಹೇಳಿಕೆಗೆ ಇದೀಗ ಕನ್ನಡ ನಿರ್ದೇಶಕ ಮಂಸೋರೆ ಕಿಡಿ ಕಾರಿದ್ದಾರೆ. ಹಿಂದಿವಾಲಗಳ ಬೆಂಬಲಕ್ಕಾಗಿ ಕನ್ನಡಿಗರ ವಿರುದ್ಧ ತಪ್ಪು ವಿವರ ನೀಡಿರುವುದಕ್ಕೆ ಅವರು ಮಾತಿನ ಛಾಟಿಯೇಟು ಬೀಸಿದ್ದಾರೆ. ಲೋಕ ಸಭೆ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿ ಈ ಧ್ರುವ ರಾಠೀ ವಿವಾದ ಉಂಟು ಮಾಡಿದ್ದರು. ಧ್ರುವ ರಾಠೀ ಅವರು ಭಾರತದ ಪ್ರಮುಖ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌. ಇವರನ್ನು ಹಲವು ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಎಕ್ಸ್‌ನಲ್ಲಿ ನಿರ್ದೇಶಕ ಮಂಸೋರೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಹೊಸ ವಿಡಿಯೋದಲ್ಲಿ ಕನ್ನಡ ಭಾಷೆಗಾಗಿ ನಡೆಸುವ ಹೋರಾಟವನ್ನು ತಪ್ಪಾಗಿ ಅರ್ಥೈಸಿ ಉಗ್ರವಾದಕ್ಕೆ ಸಮ ಎಂಬ ಅರ್ಥದಲ್ಲಿ ಹೇಳಿರುವುದು, ಭಾಷೆಯ ಉಳಿವಿಗಾಗಿ ಕನ್ನಡಿಗರು ಮಾಡುತ್ತಿರುವ ಹೋರಾಟಕ್ಕೆ ಅವಮಾನ ಮಾಡಿದಂತೆ. ನಿಮ್ಮಹಿಂದಿ ಗೋದಿ ಮೀಡಿಯಾ ಹೇಳುವ ಸುಳ್ಳನ್ನೇ ನಿಜ ಎಂದು ನ...