Bangalore, ಫೆಬ್ರವರಿ 7 -- ಬೆಂಗಳೂರು: ಕನ್ನಡ ಚಿತ್ರರಂಗದಲ್ಲ ದಶಕಗಳಿಗೂ ಕಾಲ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ದಿನೇಶ್‌ ಅವರ ಪುತ್ರ ಹಾಗೂ ನಟ ಗಿರಿ ದಿನೇಶ್‌ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಶುಕ್ರವಾರ ರಾತ್ರಿ ಅವರು ಕೊನೆಯುಸಿರೆಳೆದರು. ಗಿರಿ ದಿನೇಶ್​ ಅವರಿಗೆ 45 ವರ್ಷ ಆಗಿತ್ತು. ದಶಕದ ಹಿಂದೆ ಕನ್ನಡದ ಆ ಕಾಲದ ಎಲ್ಲಾ ವಿಲನ್‌ಗಳ ಮಕ್ಕಳು ಸೇರಿ ತೆಗೆದಿದ್ದ ಮೈಸೂರು ಅರಮನೆಯ ಚಿನ್ನದ ಅಂಬಾರಿ ಅಪಹರಿಸುವ ಕಥಾನಕದ ನವಗ್ರಹ ಎನ್ನುವ ಚಿತ್ರದಲ್ಲಿ ಗಿರಿ ದಿನೇಶ್‌ ಕೂಡ ಅಭಿನಯಿಸಿದ್ದರು. ನಟ ದರ್ಶನ್‌ ತೂಗುದೀಪ ಮುಖ್ಯ ಪಾತ್ರದಲ್ಲಿದ್ದ ನವಗ್ರಹ ಚಿತ್ರವನ್ನು ದಿನಕರ ತೂಗುದೀಪ ನಿರ್ದೇಶಿಸಿದ್ದರು.

ಬೆಂಗಳೂರಿನಲ್ಲಿಯೇ ನೆಲೆಸಿದ್ದಿ ಗಿರಿ ದಿನೇಶ್‌ ಕನ್ನಡ ಚಿತ್ರರಂಗದಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಅವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅದರಲ್ಲೂ ನವಗ್ರಹ ಚಿತ್ರದಲ್ಲಿ ದರ್ಶನ್‌, ಸೃಜನ್‌ ಲ...