Bengaluru, ಮೇ 26 -- ಅರ್ಥ: ಎಲ್ಲೆಲ್ಲಿಯೂ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ.
ಭಾವಾರ್ಥ: ಐಹಿಕ ಅಸ್ತಿತ್ವವನ್ನು ಒಪ್ಪಿಕೊಂಡು ಜೀವಿಯು ತನ್ನ ಆಧ್ಯಾತ್ಮಿಕ ಸ್ಥಿತಿಯಿಂದ ಬೇರೆ ಸ್ಥಿತಿಗೆ ಬಂದಿದ್ದಾನೆ. ಆದರೆ ಪರಮ ಪ್ರಭುವು ತನ್ನ ಪರಮಾತ್ಮ ಅಭಿವ್ಯಕ್ತಿಯಿಂದ ಎಲ್ಲೆಲ್ಲಿಯೂ ಇದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಎಂದರೆ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ದೇವೋತ್ತಮ ಪರಮ ಪುರುಷನು ಇರುವುದನ್ನು ಕಾಣಬೇಕು; ಆಗ ಮನುಷ್ಯನು ವಿನಾಶಕರ ಮನೋಧರ್ಮದಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಆ ಮೂಲಕ ಅವನು ಕ್ರಮೇಣ ಆಧ್ಯಾತ್ಮಿಕ ಜಗತ್ತಿನ ಬಳಿಗೆ ಹೋಗುತ್ತಾನೆ. ಸಾಮಾನ್ಯವಾಗಿ ಮನಸ್ಸು ಇಂದ್ರಿಯತೃಪ್ತಿಯ ಪ್ರಕ್ರಿಯೆಗಳಿಗೆ ಅಂಟಿಕೊಂಡಿರುತ್ತದೆ; ಅದು ಪರಮಾತ್ಮನ ಕಡೆ ತಿರುಗಿದಾಗ ಮನುಷ್ಯನು ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಪ್ರಗತಿಯನ್...
Click here to read full article from source
To read the full article or to get the complete feed from this publication, please
Contact Us.