ಭಾರತ, ಮಾರ್ಚ್ 6 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 50 ರನ್​ಗಳಿಂದ ಸೋತ ನಂತರ ದಕ್ಷಿಣ ಆಫ್ರಿಕಾದ ಆಟಗಾರ ಡೇವಿಡ್ ಮಿಲ್ಲರ್ ಅವರು ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲಬೇಕೆಂದು ಪರೋಕ್ಷವಾಗಿ ಪ್ರಾರ್ಥಿಸಿದ್ದಾರೆ. ಟೂರ್ನಿಯ ಸೆಮಿಫೈನಲ್​ ವೇಳಾಪಟ್ಟಿಯ ಬಗ್ಗೆ ಐಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಿಲ್ಲರ್​, ಸೆಮಿಫೈನಲ್​​ಗೂ ಮುನ್ನ ನಾವು ದುಬೈಗೆ ತೆರಳಿ ನಂತರ ಲಾಹೋರ್​ಗೆ ಮರಳಿದ್ದರ ಪರಿಣಾಮವೇ ಸೋಲಿಗೆ ಕಾರಣ ಎಂದು ಕಿಡಿಕಾರಿದ್ದಾರೆ. ಮಿಲ್ಲರ್ ಹೇಳಿಕೆಯ ಪರಮಾರ್ಥ ನೋಡಿದರೆ ಐಸಿಸಿ ಮೇಲಿರುವ ಕೋಪವನ್ನು ಭಾರತ ತಂಡದ ಮೇಲೆ ತೋರಿಸುತ್ತಿದ್ದಾರೆ ಎನ್ನುವಂತಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಮಾರ್ಚ್ 9 ರಂದು ದುಬೈ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನಲ್ಲಿ ನ್ಯೂಜಿಲೆಂಡ್ ತಂಡವು ರೋಹಿತ್ ನೇತೃತ್ವದ ಭಾರತ ತಂಡವನ್ನು ಎದುರಿಸಲಿದೆ. ಲಾಹೋರ್​ನಲ್ಲಿ ನಡೆದ 2ನೇ ಸೆಮೀಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಡುವೆಯೂ ಚಾಂಪಿ...