Bangalore, ಮೇ 12 -- ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ ದಕ್ಷತೆಯಿಂದಲೇ ಹೆಸರು ಮಾಡಿದ್ದ ಗೋಪಾಲ್‌ ಹೊಸೂರ್‌ ಅವರ ಹೆಸರನ್ನು ನೀವು ಕೇಳಿರಬಹುದು. ಅವರೀಗ ನಾಟಕವೊಂದರಲ್ಲಿ ಅಭಿನಯಿಸಿ ತಮ್ಮ ಕಲಾವಂತಿಕೆಯನ್ನೂ ಮರೆದಿದ್ದಾರೆ.

ಗೋಪಾಲ್ ಹೊಸೂರು ಅವರು ಅಂದು ವೀರಪ್ಪನ್ ಕಾರ್ಯಾಚರಣೆಯ ಹೊತ್ತಿನಲ್ಲಿ ಗುಂಡೇಟು ತಿಂದರೂ ಎದೆಗುಂದದೆ ಬದುಕುಳಿದು ಪೊಲೀಸ್ ಇಲಾಖೆಯ ಮುಖ್ಯ ಹುದ್ದೆಗಳಲ್ಲಿ ಸೇವೆಸಲ್ಲಿಸಿ,2013 ರಲ್ಲಿ ರಾಜ್ಯಗುಪ್ತದಳ ಇಲಾಖೆಯನ್ನು ಮುನ್ನಡೆಸಿ ನಿವೃತ್ತಿಹೊಂದಿದವರು.

ಕಾರಾಗೃಹ ಇಲಾಖೆಯ ಐಜಿಪಿಯಾಗಿದ್ದಾಗ ಗೋಪಾಲ್‌ ಹೊಸೂರ್ ಅವರು ಕೈದಿಗಳಲ್ಲೂ ರಂಗ ಕಲಾವಿದರು ಇರುವುದನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಈಗ ಅವರೇ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಜತೆಗಿರುವನು ಚಂದಿರ ನಾಟಕದಲ್ಲಿ ಖಾಜಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಗೋಪಾಲ್‌ ಹೊಸೂರ್‌ ಅವರು ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದವರು. ಹಲವು ಸಿಎಂಗಳ ಕಾಲದಲ್ಲಿ ಗುಪ್ತಚರ ಇಲಾಖೆಯನ್ನು ನಿಭಾಯಿಸಿ ವಿಶ್ವಾಸ ಪಡೆದವರು. ಪೊಲೀಸ್‌...