ಭಾರತ, ಮೇ 2 -- ಬಲರಾಜ್ ಸಹಾನಿ, ಎಂ.ಎಸ್ ಸತ್ಯು, ಸಾದತ್ ಹಸನ ಮಂಟೋ, ಕೆ. ಎ.ಅಬ್ಬಾಸ್, ರುತ್ವಿಕ್ ಘಟಕ್, ಸತ್ಯಜಿತರೇ, ಶಬಾನಾ, ಜಾವೇದ್ ಅಖ್ತರ್ ಮೊದಲಾದ ಚಿಂತನಶೀಲ ವ್ಯಕ್ತಿಗಳು ಭಾರತೀಯ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅಮೀರಬಾಯಿ ಕರ್ನಾಟಕಿ- ಬೇಗಂ ಅಖ್ತರ್ ಮುಂತಾದವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲೂ ಕೆಲಸ ಮಾಡಿದವರು. ಇವರದೊಂದು ಪರಂಪರೆಯಿದೆ. ಆದರೆ ಇವರ ಸಂಖ್ಯೆ ತೀರ ಕಡಿಮೆ.
ಉಳಿದಂತೆ, ಭಾರತದಲ್ಲಿ ಸೆಲೆಬ್ರಿಟಿಗಳಾಗಿರುವ ಬಹಳಷ್ಟು ನಟರು ಕ್ರಿಕೆಟ್ ಆಟಗಾರರು ಹಾಗೂ ಗಾಯಕರಲ್ಲಿ ಸಾಮಾಜಿಕವಾದ ಸೂಕ್ಷ್ಮಸಂವೇದನೆ, ಸಾಮಾನ್ಯ ತಿಳಿವಳಿಕೆ, ಓದು-ಚಿಂತನೆ ಕಡಿಮೆ. ಹಾಗೆ ಇದ್ದಿದ್ದರೆ ಅವರು ಆರೋಗ್ಯಕ್ಕೆ ಹಾನಿ ಮಾಡುವ ಕೋಕಾಕೋಲಾಕ್ಕೆ ಪಾನಪರಾಗುಗಳಿಗೆ ಮಾಡೆಲ್ ಆಗುತ್ತಿರಲಿಲ್ಲ. ಸಿರಿವಂತರ ಅದ್ದೂರಿ ಮದುವೆಗೆ ಹೋಗಿ ಲಜ್ಜೆಬಿಟ್ಟು ಕುಣಿಯುತ್ತಿರಲಿಲ್ಲ.
ದಕ್ಷಿಣ ಭಾರತದ ಜನ ತಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವುದು, ಹಿಂದಿಹೇರಿಕೆಯ ವಿರೋಧ ಮಾಡುವುದು, ತಮ್ಮ ದ್ರಾವಿಡ ಪರಂಪರೆಯ ಬಗ್ಗೆ ಮಾತಾಡುವ...
Click here to read full article from source
To read the full article or to get the complete feed from this publication, please
Contact Us.